DistrictsUncategorized

ಮುರುಗೇಶ್ ನಿರಾಣಿ ನನ್ನ ಮುಂದ ಬಚ್ಚಾ; ಯತ್ನಾಳ್

ಬೆಳಗಾವಿ; ಮುರುಗೇಶ್ ನಿರಾಣಿ ನಮ್ಮ ಮುಂದೆ ಬಚ್ಚಾ. ನಿರಾಣಿ ಟಿಕೆಟ್ ಕೇಳಲು ನಮ್ಮ ಮನೆಗೆ ಬರ್ತಿದ್ದ ಅಂತ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಮರುಗೇಶ್ ನಿರಾಣಿ ಅವರ  ಹೇಳಿಕೆ ಬಗ್ಗೆ ಮಾತಾಡಿದ ಯತ್ನಾಳ್, ಈ ರೀತಿ ಲೇವಡಿ ಮಾಡಿದರು. ಅವನು ಮಂತ್ರಿ ಹೇಗಾದ, ಏನೆಲ್ಲಾ ಪ್ರಲಾಪ ಮಾಡಿದ ಎಲ್ಲಾ ಗೊತ್ತಿದೆ. ಬಾಳ ಮಾತಾಡಿದ್ರೆ ಎಲ್ಲಾ ಬಿಡುಗಡೆ ಮಾಡಬೇಕಾಗುತ್ತೆ ಎಂದು ನಿರಾಣಿಗೆ ಯತ್ನಾಳ್ ವಾರ್ನಿಂಗ್ ಕೊಟ್ಟರು.

ಮುರುಗೇಸ್ ನಿರಾಣಿ ಅಂತವನನ್ನು ಮುಖ್ಯಮಂತ್ರಿ ಮಾಡಿದ್ರೆ ವಿಧಾನಸೌಧದ ಮರ್ಯಾದೆ ಹೋಗುತ್ತೆ‌ ಎಂದೂ ಯತ್ನಾಳ್ ಹೇಳಿದರು.

ನಾನು ಕೇಂದ್ರದ ಮಂತ್ರಿ ಆದಾಗ ಯಡಿಯೂರಪ್ಪ ಪಾತ್ರ ಏನು ಇಲ್ಲ

ಯಡಿಯೂರಪ್ಪ ಪುನರ್ ಜನ್ಮ ಆಗಿದ್ದು ನಾನು ಮಂತ್ರಿ ಆದಮೇಲೆ

Share Post