CrimeUncategorized

ಕರೊನಾ ನೆಪ; ಅವಧಿಗೆ ಮುಂಚೆ ಚುನಾವಣೆ ನಡೆಸ್ತಾರಾ..?; ಡಿಕೆಶಿ ಹೇಳಿದ್ದೇನು..?

ಬೆಳಗಾವಿ; ಕೊರೋನಾ ನೆಪವೊಡ್ಡಿ ಅವಧಿಗೆ ಮುಂಚೆಯೇ ವಿಧಾನಸಭಾ ಚುನಾವಣೆ ನಡೆಸಲು ರಾಜ್ಯ ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಹುಬ್ಬಳ್ಳಿ‌‌‌ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಕೊರೋನಾ ನೆಪವೊಡ್ಡಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಅಡ್ಡಿಪಡಿಸಲಾಗುತ್ತಿದೆ. ಕಳೆದ ಬಾರಿ ನಾವು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದಾಗಲೂ ನನ್ನ ಹಾಗೂ ಸಿದ್ದರಾಮಯ್ಯ ಅವರ ವಿರುದ್ಧ ಹಲವು ಕೇಸ್ ಗಳನ್ನ ಹಾಕಿದ್ದಾರೆ. ಈಗ ರಾಹುಲ್ ಗಾಂಧಿ ಮೇಲೆ ಅದೇ ಅಸ್ತ್ರ ಪ್ರಯೋಗಿಸುತ್ತಿದ್ದಾರೆ ಎಂದು ಡಿಕೆಶಿ ಆರೋಪಿಸಿದ್ದಾರೆ.

Share Post