DistrictsPoliticsUncategorized

Siddaramaiah: ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ‌ಖಚಿತ: ಸಿದ್ದರಾಮಯ್ಯ

ಗುಂಡ್ಲುಪೇಟೆ: ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಟ್ಟಣದ ‌ಹಳೆ ಬಸ್ ನಿಲ್ದಾಣದಲ್ಲಿ‌ ಕಾಂಗ್ರೆಸ್ ‌ಅಭ್ಯರ್ಥಿ ಗಣೇಶ್ ಪ್ರಸಾದ ಪರ ‌ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ ಮಾಜಿ ದಿವಗಂತ ಮಹದೇವಪ್ರಸಾದ್ ನನ್ನ ಬಲಗೈ ಭಂಟನಂತಿದ್ದು ಅವರ ಅಕಾಲಿಕ ಮರಣ ನನ್ನ ರಾಜಕೀಯಕ್ಕೆ ಹಿನ್ನಡೆ ಉಂಟಾಯಿತು, ಮೈಸೂರು ಮತ್ತು ಚಾಮರಾಜನಗರ ಎರಡು ಜಿಲ್ಲೆಗಳಲ್ಲಿ ತನ್ನದೆ ಆದ ಪ್ರಬಲ ಹಿಡಿತ ಹೊಂದಿದ ಪ್ರಮುಖರಾಗಿದ್ದರು ಎಂದರು.

ಬಿಜೆಪಿ ‌ಸರಕಾರ ಭ್ರಷ್ಟವಾಗಿದ್ದು ದುರಾಡಳಿತ ನಿಷ್ಕ್ರಿಯತೆ, ಜನ ವಿರೋಧಿ ನೀತಿಗಳಿಂದ ಬೇಸತ್ತು ಹೋಗಿರುವ ಜನತೆ ಬದಲಾವಣೆಯನ್ನು ಬಯಸಿದ್ದಾರೆ ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆಯುವ ಸಂಕಲ್ಪ ಮಾಡಿದ್ದಾರೆ ಹಾಗಾಗಿ ಈ ಬಾರಿ ಕಾಂಗ್ರೆಸ್ ಸರ್ಕಾರ‌ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರನಷ್ಟೆ ಸತ್ಯ ಎಂದು ಭವಿಷ್ಯ ನುಡಿದರು.

ಗಣೇಶ್ ಪ್ರಸಾದ್ ಗೆ ಕೊಡುವ ಮತ ಸಿದ್ದರಾಮಯ್ಯನಿಗೆ ಕೊಟ್ಟಂತೆ ಗಣೇಶ್ ಪ್ರಸಾದ ಗೆಲುವು ಸಿದ್ದರಾಮಯ್ಯನ ಗೆಲುವು ಆದ್ದರಿಂದ ತಪ್ಪದೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಮನವಿ ಮಾಡಿದರು.

ಹಾಲಿ ಶಾಸಕ ನಿರಂಜನ್ ಕುಮಾರ್ ಕ್ಷೇತ್ರಕ್ಕೆ ಏನು ಮಾಡಿಲ್ಲ ನನ್ನ ಮುಖ್ಯ ಮಂತ್ರಿ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ಬಡವರಿಗೆ ನೀಡಿದೆ ಬಿಜೆಪಿ ಸರಕಾರ ಎಷ್ಟು ಮನೆಗಳನ್ನು ನೀಡಿದೆ ಎಂದು ಪ್ರಶ್ನೆ ಮಾಡಿದರು.

ವಸತಿ ಸಚಿವ ವಿ.ಸೋಮಣ್ಣನ ಹತ್ತಿರ ಬಡ ಮಹಿಳೆ ನಿವೇಶನ ಕೇಳಿದರೆ ಅವಳ ಹಲ್ಲೆ ಮಾಡಿದ ಸಚಿವರಿಂದ ಏನು ನಿರೀಕ್ಷಸಲು ಸಾಧ್ಯ ಎಂದು ಕಿಡಿಕಾರಿದರು.

ನುಡಿದಂತೆ ನಡೆಯುವ ಸರಕಾರ ಎಂದರೆ ಅದು ಕಾಂಗ್ರೆಸ್ ಸರಕಾರ ಪಕ್ಷದ ಪ್ರಣಾಳಿಕೆಯಂತೆ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿದ್ದು ಅಧಿಕಾರಕ್ಕೆ ಬಂದ ನಂತರ ಜಾರಿಗೊಳಿಸಲಾಗುವುದು ಎಂದು ಹೇಳಿದರು.

Share Post