BengaluruPolitics

BOMMAI; ಕೊರೊನಾ ಸಮಯದಲ್ಲಿ ನಾವು ಜೊತೆಗಿದ್ದೆವು; ಬಸವರಾಜ ಬೊಮ್ಮಾಯಿ

ಬೆಂಗಳೂರು; ಕೊರೊನಾ ಸಮಯದಲ್ಲಿ ನಾನು ಜನರ ಜೊತೆಗಿದ್ದೆವು. ಕಷ್ಟಕಾಲದಲ್ಲಿ ಜನರ ಜೊತೆಗೆ ಇದ್ದದ್ದು ನಮ್ಮ ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಾಜ್ಯದ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಇಡೀ ದೇಶಕ್ಕೆ ನಮ್ಮ ಸರ್ಕಾರ ಮಾದರಿಯಾಗಿದೆ ಎಂದು ಹೇಳಿದ್ದಾರೆ.

ಕೊರೊನಾ ಸಮಯದಲ್ಲಿ ಲಸಿಕೆ ಮೂಲಕ ರಾಜ್ಯದ ಜನರನ್ನು ರಕ್ಷಣೆ ಮಾಡಿದ್ದೇವೆ. ಕೊರೊನಾ ಸಂಕಷ್ಟ ಜನರ ಜೊತೆ ನಾವಿದೆದೆವು. ಪ್ರವಾಹ ಬಂದಾಗ ಜನರಿಗೆ ಪರಿಹಾರವನ್ನು ಕೊಟ್ಟಿದ್ದೇವೆ. ಕಾಂಗ್ರೆಸ್‌ ಇದ್ದಾಗ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಜನರಿಗೆ ಮನೆ ಕಟ್ಟಿಸಿಕೊಡಲು ನಾವು ಸಹಾಯ ಮಾಡಿದ್ದೇವೆ. ಕಾಂಗ್ರೆಸ್‌ ಇದ್ದಿದ್ದರೆ ಯಾವ ಕೆಲಸಗಳೂ ಆಗುತ್ತಿರಲಿಲ್ಲ. ರೈತರಿಗೆ ಮುಂಗಾರು ಬಿತ್ತನೆಗಾಗಿ ಹತ್ತು ಸಾವಿರ ರೂಪಾಯಿ ನೀಡುತ್ತೇವೆ. ಕೈಗಾರಿಕೆಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಜಿಎಎಸ್‌ಟಿ ಸಂಗ್ರಹ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಸಿಎಂ ಹೇಳಿದರು.

Share Post