DistrictsPolitics

ರೌಡಿ ಶೀಟರ್‌ಗೆ ಅಧಿಕಾರಿಗಳಿಂದ ಸನ್ಮಾನ ಮಾಡಿಸಿದ ಶಾಸಕ ರಮೇಶ್‌ ಬಂಡಿಸಿದ್ದೇಗೌಡ

ಮಂಡ್ಯ; ವಿಧಾನಸಭಾ ಚುನಾವಣೆ ಸಮಯದಲ್ಲಿ ಹಲವು ರೌಡಿ ಶೀಟರ್‌ಗಳು ಬಿಜೆಪಿ ಸೇರಿದ್ದರು. ಈ ವೇಳೆ ಕಾಂಗ್ರೆಸ್‌ ನಾಯಕರು, ಆಕ್ರೋಶ ಹೊರಹಾಕಿದ್ದರು. ಆದ್ರೆ ಇದೀಗ ಅದೇ ಕಾಂಗ್ರೆಸ್‌ ಪಕ್ಷದ ನಾಯಕರು ರೌಡಿ ಶೀಟರ್‌ಗೆ ಸನ್ಮಾನ ಮಾಡಿಸಿದ್ದಾರೆ. ಅದೂ ಕೂಡಾ ಸರ್ಕಾರಿ ಅಧಿಕಾರಿಗಳಿಂದ ಸನ್ಮಾನ ಮಾಡಿಸಿ ವಿವಾದಕ್ಕೆ ಕಾರಣರಾಗಿದ್ದಾರೆ.

ಹೌದು, ನಿನ್ನೆ ರಾತ್ರಿ ಕೆಆರ್ ಎಸ್ ನೃತ್ಯ ಕಾರಂಜಿ ಉದ್ಘಾಟನೆ ಉದ್ಘಾಟನೆ ಏರ್ಪಡಿಸಲಾಗಿತ್ತು. ಈ ವೇದಿಕೆಯಲ್ಲಿ ಶ್ರೀರಂಗಪಟ್ಟಣ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಅವರ ಸೂಚನೆ ಮೇರೆಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ರೌಡಿ ಶೀಟರ್‌ ದೇವರಾಜು ಅಲಿಯಾಸ್ ಬುಲ್ಲಿಗೆ ಸನ್ಮಾನ ಮಾಡಿದ್ದಾರೆ. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಕಾರ್ಯಕ್ರಮದಲ್ಲಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ,ಮಂಡ್ಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಕೂಡಾ ಇದ್ದರು. ಇದೇ ವೇದಿಕೆಯಲ್ಲಿ ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದಿದ್ದರೂ ದೇವರಾಜು ಅಲಿಯಾಸ್‌ ಬುಲ್ಲಿಗೆ ಸನ್ಮಾನ ಮಾಡಲಾಗಿದೆ. ಈತ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಈ ಭಾಗದಲ್ಲಿ ಕುಖ್ಯಾತ ರೌಡಿ ಎನಿಸಿಕೊಂಡಿದ್ದಾನೆ.

Share Post