NationalPolitics

ಗಾಂಧಿಭವನದತ್ತ ರೇವಂತ್‌ರೆಡ್ಡಿ; ವಿಜಯದ ಸಂಕೇತ ತೋರಿದ ಡಿಕೆಶಿ

ಹೈದರಾಬಾದ್‌; ತೆಲಂಗಾಣದಲ್ಲಿ ಕಾಂಗ್ರೆಸ್‌ ಗೆಲುವು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಈಗಾಗಲೇ ವಿಜಯೋತ್ಸವ ಆಚರಿಸುತ್ತಿದೆ. ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ರೇವಂತ್‌ ರೆಡ್ಡಿ ನಿವಾಸದ ಬಳಿ ಸಾವಿರಾರು ಮಂದಿ ಸೇರಿದ್ದಾರೆ. ಈ ನಡುವೆ ರೇವಂತ್‌ ರೆಡ್ಡಿ ತಮ್ಮ ನಿವಾಸದಿಂದ ಕಾಂಗ್ರೆಸ್‌ ಕಚೇರಿ ಗಾಂಧಿ ಭವನ್‌ ಕಡೆ ಹೊರಟಿದ್ದಾರೆ. ತೆರೆದ ಕಾರಿನಲ್ಲಿ ಮೆರವಣಿಗೆ ಮೂಲಕ ಅವರು ಗಾಂಧಿ ಭವನಕ್ಕೆ ಆಗಮಿಸಲಿದ್ದಾರೆ.

ಇನ್ನೊಂದೆಡೆ ಕರ್ನಾಟಕ ಸರ್ಕಾರದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಹೈದರಾಬಾದ್‌ನ ತಾಜ್‌ ಕೃಷ್ಣ ಹೋಟೆಲ್‌ನಲ್ಲಿ ತಂಗಿದ್ದರು. ಅವರು ಕೂಡಾ ಗಾಂಧಿ ಭವನದತ್ತ ಹೊರಟಿದ್ದಾರೆ. ಇದೇ ವೇಳೆ ಅವರು ವಿಜಯದ ಸಂಕೇತ ತೋರಿಸಿದ್ದಾರೆ. ಸಂಜೆ ಗಾಂಧಿ ಭವನದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

 

ತಾಜ್‌ ಕೃಷ್ಣ

ಗಾಂಧಿ ಭವನ್‌

 

Share Post