DistrictsPolitics

ಬಿಜೆಪಿ ನಾಯಕರ ವಾಗ್ಯುದ್ಧ; ಕಿತ್ತಾಡಿಕೊಂಡ ಶ್ರೀನಿವಾಸ ಪ್ರಸಾದ್‌-ಸಿ.ರಮೇಶ್‌

ಮೈಸೂರು; ಮೈಸೂರು ಜಿಲ್ಲೆಯ ಇಬ್ಬರು ಬಿಜೆಪಿ ನಾಯಕರ ಪರಸ್ಪರ  ವಾಗ್ಯುದ್ಧ ನಡೆಸಿರುವ ಘಟನೆ ಟಿ ನರಸೀಪುರದಲ್ಲಿ ನಡೆದಿದೆ. ಅತಿಥಿ ಗೃಹ ಉದ್ಘಾಟನೆ ವೇಳೆ ಮಾಜಿ ಶಾಸಕ ಸಿ.ರಮೇಶ್‌ ಹಾಗೂ ಸಂಸದ ಶ್ರೀನಿವಾಸ ಪ್ರಸಾದ್‌ ನಡುವೆ ವಾಗ್ವಾದ ನಡೆದಿದೆ.

ಇಬ್ಬರೂ ನಾಯಕರು ಏಕವಚನದಲ್ಲೇ ಬೈದಾಡಿಕೊಂಡಿದ್ದಾರೆ.  ಮಾಜಿ ಶಾಸಕ ಸಿ ರಮೇಶ್ ರಮೇಶ್ ರನ್ನು ಆಚೆ ಕಳುಹಿಸಿ ಎಂದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಬರಿ ಕೀಟಲೆ ಮಾಡಲಿಕ್ಕೆ ಬರುತ್ತೀಯ ಎಂದು ಗದರಿದ್ದಾರೆ. ಇದಕ್ಕೆ ಪ್ರತಿಕ್ರಿಯಸಿರುವ ಮಾಜಿ ಶಾಸಕ ರಮೇಶ್‌ ನನ್ನನ್ನ ಅವಮಾನ ಮಾಡಲಿಕ್ಕೆ ಕರೆದೆಯಾ..?. ಮತ್ತೊಮ್ಮೆ ನನ್ನನ್ನ ಯಾವುದೇ ಕಾರ್ಯಕ್ರಮಕ್ಕೆ ಕರೆಯಬೇಡ ಎಂದು ಶ್ರೀನಿವಾಸ ಪ್ರಸಾದ್‌ಗೆ ತಿರುಗೇಟು ನೀಡಿದ್ದಾರೆ.

 

Share Post