LifestylePolitics

ಕನಕ ದುರ್ಗಮ್ಮನ ದರ್ಶನ ಪಡೆದ ಪವನ್‌ ಕಲ್ಯಾಣ್‌ ಹಾಗೂ ಪುತ್ರಿ

ಆಂಧ್ರಪ್ರದೇಶ; ಆಂಧ್ರಪ್ರದೇಶದ ವಿಜಯವಾಡ ನಗರದ ಇಂದ್ರಕೀಲಾದ್ರಿಯಲ್ಲಿ ನವರಾತ್ರಿ ಮಹೋತ್ಸವಗಳು ವಿಜೃಂಭಣೆಯಿಂದ ನಡೆಯುತ್ತಿವೆ.. ನವರಾತ್ರಿ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಹಾಗೂ ಅವರ ಮಗಳು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು..
ಪವನ್‌ ಕಲ್ಯಾಣ್‌ ಅವರು ತಮ್ಮ ಪುತ್ರಿ ಆದ್ಯಾ ಕೋಣೀಡೆ ಅವರನ್ನು ಕರೆದುಕೊಂಡು ಬಂದಿದ್ದರು.. ಮೂಲಾ ನಕ್ಷತ್ರದಲ್ಲಿ ಸರಸ್ವತಿ ದೇವಿಯ ರೂಪದಲ್ಲಿ ಕನಕದುರ್ಗಮ್ಮನ ದರ್ಶನ ಪಡೆಯಲಾಯಿತು.. ಇದೇ ವೇಳೆ ಸಾವಿರಾರು ಭಕ್ತರು ಅಮ್ಮನವರ ದರ್ಶನ ಪಡೆದುಕೊಂಡರು. ಸಾವಿರಾರು ಭಕ್ತರು ಸಾಲುಗಟ್ಟಿ ನಿಂತಿದ್ದರು..
ಪವನ್‌ ಕಲ್ಯಾಣ್‌ ಅವರು ಡಿಸಿಎಂ ಆದ ಮೇಲೆ ಹಿಂದೂ ಧರ್ಮದ ಪರವಾಗಿ ಹೆಚ್ಚು ಮಾತನಾಡುತ್ತಿದ್ದಾರೆ.. ಪದೇ ಪದೇ ವ್ರತಾಚರಣೆಗಳನ್ನು ಮಾಡುತ್ತಿದ್ದಾರೆ.. ಪ್ರಖ್ಯಾತ ದೇಗುಲಗಳಿಗೆ ಭೇಟಿ ನೀಡಿ ಪೂಜೆಗಳನ್ನು ಸಲ್ಲಿಸಿ ಜನರ ಗಮನ ಸೆಳೆಯುತ್ತಿದ್ದಾರೆ…

Share Post