CrimeDistricts

ಹೆಣ್ಣು ಕೊಟ್ಟ ಅತ್ತೆಯ ಕತ್ತು ಕುಯ್ದು ಕೊಲೆ ಮಾಡಿದ ಅಳಿಯ!

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರದಲ್ಲಿ ಭೀಕರ ಕೊಲೆಯೊಂದು ನಡೆದಿದೆ.. ಚಿಂತಾಮಣಿ ತಾಲ್ಲೂಕಿನ ಯಂಬಿಗಾನಹಳ್ಳಿಯಲ್ಲಿ ಅಳಿಯನೇ ಅತ್ತೆಯ ಕತ್ತು ಕುಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ.. ಮಾವನ ಮೇಲೂ ದಾಳಿ ನಡೆಸಲಾಗಿದೆ..
43 ವರ್ಷದ ಕವಿತಮ್ಮ ಎಂಬಾಕೆಯೇ ಕೊಲೆಯಾದ ಮಹಿಳೆಯಾಗಿದ್ದಾಳೆ.. ಕೌಟುಂಬಿಕ ಕಲಹದ ಜಿನ್ನೆಲೆಯಲ್ಲಿ ಅಳಿಯ ಚಂದ್ರು ಎಂಬಾತನ ಅತ್ತೆ, ಮಾವನ ಜೊತೆ ಜಗಳ ಮಾಡಿಕೊಂಡಿದ್ದಾನೆ.. ಈ ವೇಳೆ ಜಗಳ ತಾರಕಕ್ಕೇರಿ ಅತ್ತೆ ಹಾಗೂ ಮಾವನ ಮೇಲೆ ಅಳಿಯ ಚಂದ್ರ ದಾಳಿ ಮಾಡಿದ್ದಾನೆ.. ಚಾಕುವಿನಿಂದ ಅತ್ತೆ ಕುತ್ತಿಗೆ ಕುಯ್ದಿದ್ದಾನೆ.. ನಂತರ ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ.
ತೀವ್ರವಾಗಿ ಗಾಯಗೊಂಡಿದ್ದ ಅತ್ತೆ ಕವಿತಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ಮಾವನಿಗೂ ಗಾಯಗಳಾಗಿವೆ.. ಸ್ಥಳಕ್ಕೆ ಚಿಂತಾಮಣಿ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.. ಆರೋಪಿ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ..

Share Post