Politics

ವಿಪಕ್ಷ ನಾಯಕ ರಾಹುಲ್‌ ಗಾಂಧಿ ಭಾಷಣಕ್ಕೆ ಕತ್ತರಿ!

ನವದೆಹಲಿ; ನಿನ್ನೆ ನಡದ ಲೋಕಸಭಾ ಕಲಾಪದಲ್ಲಿ ಹಿಂದೂ ಧರ್ಮ ಸೇರಿ ಹಲವು ವಿವಾದಾತ್ಮಕ ಮಾತುಗಳನ್ನಾಡಿದ್ದ ರಾಹುಲ್‌ ಗಾಂಧಿ ಭಾಷಣದ ಕೆಲ ಅಂಶಗಳನ್ನು ಕಲಾಪದ ಕಡತದಿಂದ ತೆಗೆಯಲಾಗಿದೆ.. ಸ್ಪೀಕರ್ ಓಂ ಬಿರ್ಲಾ ಸೂಚನೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ..

ವಿಪಕ್ಷ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ವೇಳೆ, ಅವರು ಬಿಜಪಿ ನಾಯಕರ ವಿರುದ್ಧ ಮುಗಿಬಿದ್ದರು.. ಶಿವನ ಫೋಟೋ ಹಿಡಿದು, ಬಿಜೆಪಿಯವರು ಮಾತ್ರ ಹಿಂದೂಗಳಲ್ಲ ಎಂದು ಹೇಳಿದರು.. ಬಿಜೆಪಿ ನಾಯಕರು ಧರ್ಮದ ಹೆಸರಿನಲ್ಲಿ ಜನರನ್ನು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.. ರಾಹುಲ್‌ ಗಾಂಧಿಯವರ ಭಾಷಣಕ್ಕೆ ಬಿಜೆಪಿಯಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು..

ಇನ್ನು ರಾಹುಲ್‌ ಗಾಂಧಿಯವರ ಭಾಷಣದ ಆಕ್ಷೇಪಾರ್ಹ ವಿಚಾರಗಳನ್ನು ಕಲಾಪದ ಕಡತದಿಂದ ತೆಗೆದು ಹಾಕಲು ಸೂಚಿಸಲಾಗಿದೆ.. ಇನ್ನು ಬಿಜೆಪಿ ನಾಯಕರು ರಾಹುಲ್‌ ಗಾಂಧಿಯವರು ಸದನದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ..

 

Share Post