Politics

ಸಚಿವನ ಅತ್ಯಾಪ್ತನ ಮನೆಯಲ್ಲಿ 18 ಕೋಟಿ ರೂ. ಪತ್ತೆ!; ಏನೋ ಹುಡುಕಲು ಹೋದಾಗ..

ಧಾರವಾಡ; ಧಾರವಾಡದ ದಾಸನಕೊಪ್ಪ ಅರ್ನಾ ಅಪಾರ್ಟ್‌ಮೆಂಟ್‌ನಲ್ಲಿ ಚುನಾವಣಾಧಿಕಾರಿಗಳು ಮದ್ಯ ಹುಡುಕಲು ಹೋಗಿದ್ದರು. ಆದ್ರೆ ಅವರಿಗೆ ಸಿಕ್ಕಿದ್ದು ಹಣ.. ಅದು ಅಷ್ಟೂ ಇಷ್ಟೋ ಅಲ್ಲ.. ಬರೋಬ್ಬರಿ 18 ಕೋಟಿ ರೂಪಾಯಿ..!  ಬಸವರಾಜ ದತ್ತೂ ಅವರ ಮನೆಯಲ್ಲಿ ಇಷ್ಷಟು ದೊಡ್ಡ ಮೊತ್ತದ ನಗದನ್ನು ವಶಪಡಿಸಿಕೊಳ್ಳಲಾಗಿದೆ..

ಇದನ್ನೂ ಓದಿ; ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ಕೇಂದ್ರ ಚುನಾವಣೆ ಆಯೋಗಕ್ಕೆ ದೂರು

ಮದ್ಯ ಹುಡುಕಲು ಹೋಗಿದ್ದ ಅಧಿಕಾರಿಗಳು;

ಬಸವರಾಜ ದತ್ತೂ ಅವರ ಮನೆಯಲ್ಲಿ ಮದ್ಯ ಸಂಗ್ರಹ ಮಾಡಲಾಗಿದೆ ಎಂಬ ಮಾಹಿತಿ ಬಂದಿತ್ತು.. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ದಾಳಿ ಮಾಡಿದ್ದರು.. ಆದ್ರೆ ಅಲ್ಲಿ ಮದ್ಯ ಸಿಗಲಿಲ್ಲ.. ಬದಲಾಗಿ ಹಣ ಸಿಕ್ಕಿದೆ.. ಬಸವರಾಜ ದತ್ತೂ ಅವರ ಮನೆಯಲ್ಲಿ ಒಂದಷ್ಟು ಚೀಲಗಳು ಕಾಣಿಸಿವೆ.. ಅಲ್ಲಿ ಹುಡುಕಾಡಿದಾಗ ಏನೂ ಸಿಕ್ಕಿಲ್ಲ.. ಕೊನೆಗೆ ಮನೆಯಲ್ಲಿ ಟ್ರೆಝರಿ ಪರಿಶೀಲಿಸಿದ್ದಾರೆ. ಈ ವೇಳೆ 18 ಕೋಟಿ ರೂಪಾಯಿ ನಗದು ಸಿಕ್ಕಿದೆ..

ಇದನ್ನೂ ಓದಿ; ರಜೆ ನೀಡಿ, ಮತ ಹಾಕಲು ಪ್ರೋತ್ಸಾಹಿಸಿ; ತುಷಾರ್ ಗಿರಿನಾಥ್

ಆದಾಯ ತೆರಿಗೆ ಇಲಾಖೆಗೆ ಕೇಸ್‌ ಶಿಫ್ಟ್‌;

ಬೃಹತ್‌ ಮೊತ್ತದ ಹಣ ಸಿಕ್ಕಿದ್ದರಿಂದ ಚುನಾವಣಾಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.. ಇಷ್ಟು ದೊಡ್ಡ ಮೊತ್ತದ ಹಣ ಎಣಿಸಲು ಯಂತ್ರವನ್ನೇ ತರಿಸಿ ಅದರಿಂದ ಎಣಿಸಿದ್ದಾರೆ.. ಯಂತ್ರದಿಂದ ಎಣಿಕೆ ಮಾಡುವುದಕ್ಕೂ ಗಂಟೆಗಟ್ಟಲೆ ಹಿಡಿದಿದೆ. ಇನ್ನು ಚುನಾವಣಾಧಿಕಾರಿಗಳು ಈ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ಶಿಫ್ಟ್‌ ಮಾಡಿದ್ದಾರೆ.

ಇದನ್ನೂ ಓದಿ; 349 ರೂಪಾಯಿಗೆ ವಿಮಾನದಲ್ಲಿ ಪ್ರಯಾಣ ಮಾಡಬಹುದು!; ಎಲ್ಲಿಂದ ಎಲ್ಲಿಗೆ ಗೊತ್ತಾ..?

ಯಾರು ಈ ಬಸವರಾಜ ದತ್ತೂನವರ..?​

ಬಸವರಾಜ ದತ್ತೂನವರ ಅವರು ಧಾರವಾಡ ಜಿಲ್ಲೆಯ ದುಮ್ಮವಾಡ ಗ್ರಾಮದ ಮೂಲದವರು.. ಎಲ್‌ಎಲ್‌ಬಿ ಮುಗಿಸಿದ್ದ ಅವರು ಲಾ ಪ್ರಾಕ್ಟೀಸ್‌ ಜೊತೆಗೆ ರಿಯಲ್ ಎಸ್ಟೇಟ್ ವ್ಯವಹಾರ ಕೂಡಾ ಮಾಡ್ತಿದ್ದಾರೆ.

ಇದನ್ನೂ ಓದಿ; ಈ ಬ್ಯುಸಿನೆಸ್‌ಗೆ ಯಾವತ್ತಿಗೂ ಡಿಮ್ಯಾಂಡ್‌ ಇರುತ್ತೆ..!; ತಡ ಯಾಕೆ ಶುರು ಮಾಡಿ..

 

Share Post