National

ಭಾರೀ ಆತಂಕ ಸೃಷ್ಟಿಸಿದ ಸೂಟ್‌ಕೇಸ್:‌ ಪೊಲೀಸರ ಪರಿಶೀಲನೆ

ತಿರುಪತಿ: ಸರ್ಕಾರಿ ಬಸ್‌ ನಿಲ್ದಾಣದಲ್ಲಿ ಅಜ್ಞಾತ ವ್ಯಕ್ತಿ ಬಿಟ್ಟು ಹೋದ ಸೂಟ್‌ಕೇಸ್‌ ಆತಂಕ ಸೃಷ್ಟಿ ಮಾಡಿತ್ತು. ಚಿತ್ತೂರು ಜಿಲ್ಲೆಯ ತಿರುಪತಿ ಬಸ್ಟಾಂಡ್‌ನ ಶ್ರೀಕಾಳ ಹಸ್ತಿ ಬಸ್‌ ನಿಲುಗಡೆಯಲ್ಲಿ ಯಾರೋ ವ್ಯಕ್ತಿ ಸೂಟ್‌ಕೇಸ್‌ ಬಿಟ್ಟು ಹೋಗಿದ್ದಾರೆ. ಸಮಯ ಕಳೆದಂತೆ ಸೂಟ್‌ಕೇಸ್‌ ಅಲ್ಲೇ ಇದೆ ಇದು ಪ್ರಯಾಣಿಕರಲ್ಲಿ ಆತಂಕ ಉಂಟುಮಾಡಿತ್ತು. ಕೂಡಲೇ ಈ ವಿಚಾರವನ್ನು ಡಿಪೋ ಮ್ಯಾನೇಜರ್‌ ಗಮನಕ್ಕೆ ತಂದರು. ಡಿಪೋ ಮ್ಯಾನೇಜರ್‌ ಪೊಲೀಸರಿಗೆ ವಿಷಯ ಮುಟ್ಟಿಸಿ ಬಾಂಬ್‌ ಸ್ಕ್ವಾಡ್‌ ಮತ್ತು ಡಾಗ್‌ ಸ್ಕ್ವಾಡ್ ಅನ್ನು ಸ್ಥಳಕ್ಕೆ ಕರೆಸಿದರು.

ಇಪ್ಪತ್ತು ನಿಮಿಷಗಳ ಕಾಲ ಸೂಟ್‌ಕೇಸ್‌ ಪರಿಶೀಲನೆ ಮಾಡಿದ ಅದು ಯಾರೋ ಪ್ರಯಾಣಿಕರು ಬಿಟ್ಟು ಹೋಗಿದ್ದು, ಪ್ರಮಾದ ಸೃಷ್ಟಿಸುವ ಯಾವುದೇ ವಸ್ತುಗಳಿಲ್ಲ, ಲಂಚ್‌ ಬಾಕ್ಸ್‌, ಮತ್ತಿತರ ವಸ್ತುಗಳು ಇರುವುದಾಗಿ ತಿಳಿಸಿದ ನಂತರ ಪ್ರಯಾಣಿಕರು ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟರು. ಪ್ರಯಾಣಿಕರು ಭಯಪಡುವ ಅಗತ್ಯವಿಲ್ಲ, ಯಾರೋ ವ್ಯಕ್ತಿ ಬಸ್‌ಗೆ ತೆರಳುವ ಅವಸರದಲ್ಲಿ ಸೂಟ್‌ಕೇಸ್‌ ಬಿಟ್ಟು ಹೋಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

Share Post