Politics

ಗಂಡಸ್ತನ ಇದ್ದರೆ ಯೋಜನೆ ಜಾರಿಗೆ ತನ್ನಿ : ಅಶ್ವಥ್‌ ನಾರಾಯಣ್

ರಾಮನಗರ : ಅಶ್ವಥ್‌ ನಾರಾಯಣ್‌ ಅವರು ಮೇಕೆದಾಟು ವಿಚಾರವಾಗಿ ಸುದ್ದಿಘೋಷ್ಠಿ ನಡೆಸಿ ಕಾಂಗ್ರೆಸ್‌ ವಿರುದ್ಧ ಗರಂ ಆಗಿದ್ದಾರೆ. ಮೇಕೆದಾಟು ಯೋಜನೆಯನ್ನು ಕಾಂಗ್ರೆಸ್‌ ಅವರಿಂದ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ. ಬಿಜೆಪಿಯಿಂದ ಮಾತ್ರ ಅದು ಸಾಧ್ಯ. ನಿಮಗೆ ಗಂಡಸ್ತನ ಇದ್ದರೆ ಯೋಜನೆಯನ್ನು ಜಾರಿ ಮಾಡಿ ತೋರಿಸಿ ಎಂದು ಸಚಿವ ಅಶ್ವಥ್‌ ನಾರಾಯಣ್‌ ಕಿಡಿ ಕಾರಿದ್ದಾರೆ.

ನಾಡಿನ ನೆಲ, ಜಲದ ಹಿತ ಕಾಪಾಡುವುದು ಬಿಜೆಪಿಯ ಮೊದಲ ಆದ್ಯತೆ ಆಗಿದೆ. ನಮ್ಮ ಜನ ನಮ್ಮ ರಾಜ್ಯಕ್ಕೆ ನಾವು ಮೊದಲ ಆದ್ಯತೆ ನೀಡ್ತೇವೆ. ಅಧಿಕಾರಕ್ಕೋಸ್ಕರ ಏನು ಬೇಕಾದರು ಮಾಡುವವರು ನಾವಲ್ಲ ಎಂದು ಕಾಂಗ್ರೆಸ್‌ ಅನ್ನು ಟೀಕಿಸಿದ್ದಾರೆ.

ಮೇಕೆದಾಟು ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ನಾವು ಯೋಜನೆ ಜಾರಿ ಮಾಡಲು ಮುಂದಾಗಿದ್ದಕ್ಕೆ ಡಿಕೆ ಶಿವಕುಮಾರ್‌ ಈ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಹೇಳಿದರು. ನಾನು ಕಾಂಗ್ರೆಸ್‌ಗೆ ನೇರವಾಗಿ ಸವಾಲ್‌ ಹಾಕ್ತೇನೆ. ನಾವು ಗಂಡಸರು, ಗಂಡಸ್ತನ ಇರುವುದಕ್ಕೆ ಈ ಯೋಜನೆ ಜಾರಿ ಮಾಡ್ತೀವಿ. ನಿಮಗೆ ಗಂಡಸ್ತನ ಇದ್ದರೆ ಮಾಡಿ ತೋರಿಸಿ ಎಂದು ಅಶ್ವಥ್‌ ನಾರಾಯಣ್‌ ಗುಡುಗಿದ್ದಾರೆ.

Share Post