Districts

ಶಿವಕುಮಾರ ಶ್ರೀಗಳ ಸ್ಮರಣಾರ್ಥ ದಾಸೋಹ ಕಾರ್ಯಕ್ರಮ ರದ್ದು

ತುಮಕೂರು : ಕೋವಿಡ್‌ ಹೆಚ್ಚಳದ ಕಾರಣ ಸರ್ಕಾರ ಸಭೆ, ಸಮಾರಂಭಗಳಿಗೆ ಜನರ ಮಿತಿಯನ್ನು ಹೇರಿದೆ. ಮೂರನೇ ಅಲೆ ಬೆಂಗಳೂರಿನಲ್ಲಿ ಹೆಚ್ಚಿದೆ, ಆದರೆ ಹೊರ ಜಿಲ್ಲೆಗಳಲ್ಲಿ ಅಷ್ಟೋಂದು ವ್ಯಾಪಿಸಿಲ್ಲ ಆದರೂ ಮುಂಜಾಗೃತಾ ಕ್ರಮವಾಗಿ ರಾಜ್ಯಾದ್ಯಂತ ನೈಟ್‌ ಕರ್ಫೈೂ ಮತ್ತು ಇನ್ನಷ್ಟು ಕಠಿಣ ರೂಲ್ಸ್‌ ಅನ್ನು ಜಾರಿ ಮಾಡಲಾಗಿದೆ. ಈಗ ಎಲ್ಲೆಡೆ ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಶಿವಕುಮಾರ ಶ್ರೀಗಳ ಸ್ಮರಣಾರ್ಥ ದಾಸೋಹ ಕಾರ್ಯಕ್ರವನ್ನು ರದ್ದು ಮಾಡಲಾಗಿದೆ.

ಈ ಸ್ಮರಣಾರ್ಥ ದಾಸೋಹಕ್ಕೆ ಸಾವಿರಾರು ಜನ ಭಕ್ತರು ಸೇರುವ ನಿರೀಕ್ಷೆ ಇತ್ತು. ಜನವರಿ 21 ರಂದು ನಡೆಯಬೇಕಿದ್ದ  ಈ ಸ್ಮರಣಾರ್ಥ ಕಾರ್ಯಕ್ರಮವನ್ನು ಈಗ ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಶ್ರೀಗಳು ಲಿಂಗೈಕ್ಯರಾಗಿ ಇಲ್ಲಿಗೆ ಮೂರು ವರ್ಷಗಳಾಗ್ತಿವೆ. ಮೊದಲ ವರ್ಷ ಮಾತ್ರ ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸಲು ಸಾಧ್ಯವಾಗಿತ್ತು. ಈಗ ಮತ್ತೆ ಕೋವಿಡ್‌ ಹೆಚ್ಚಳದ ಕಾರಣ ಸಾಧ್ಯವಾಗುತ್ತಿಲ್ಲ

 

Share Post