CrimeNational

ತಾಯಿಯನ್ನು ಕೊಂದು, ಅಂಗಾಗ ಕತ್ತರಿಸಿ ಬೇಯಿಸಿಕೊಂಡು ತಿಂದಿದ್ದ ಮಗ!

ತಾಯಿಯೇ ದೇವರು ಅಂತಾರೆ.. ಆದ್ರೆ ಇಲ್ಲೊಬ್ಬ ತಾಯಿಯನ್ನು ಕೊಲೆ ಮಾಡಿ, ಆಕೆ ಅಂಗಾಂಗಗಳನ್ನು ಪೀಸ್‌ ಪೀಸ್‌ ಮಾಡಿ ಬೇಯಿಸಿಕೊಂಡು ತಿಂದಿದ್ದಾನೆ.. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಇಂತಹದ್ದೊಂದು ಪೈಶಾಚಿಕ ಕೃತ್ಯ ನಡೆದಿದೆ.. 2017ರಲ್ಲಿ ಈ ಕೃತ್ಯ ಎಸಗಲಾಗಿದ್ದು, ಇದೀಗ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ..

2017ರಲ್ಲಿ ಸುನಿಲ್ ಎಂಬ ವ್ಯಕ್ತಿ ತನ್ನ ತಾಯಿ ರಮಾ ಎಂಬಾಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ನಂತರ ಅಂಗಾಂಗಗಳನ್ನು ಕತ್ತರಿಸಿ ಬೇಯಿಸಿಕೊಂಡು ತಿಂದಿದ್ದ.. 2021 ರಲ್ಲಿ ಕೊಲ್ಲಾಪುರ ನ್ಯಾಯಾಲಯವು ಆರೋಪಿಗೆ ಮರಣದಂಡನೆ ವಿಧಿಸಿತು. ಇದನ್ನು ಪ್ರಶ್ನಿಸಿ ಸುನೀಲ್ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ಪರಿಗಣಿಸಿರುವ ಹೈಕೋರ್ಟ್ ಮರಣದಂಡನೆ ವಿಧಿಸುವ ಕುರಿತು ಚರ್ಚೆ ನಡೆಸುತ್ತಿದೆ.

ಅದರೊಂದಿಗೆ ಸುನಿಲ್‌ಗೆ ಸಂಬಂಧಿಸಿದ ಮಾನಸಿಕ ಮತ್ತು ಮನೋವೈದ್ಯಕೀಯ ವರದಿಗಳನ್ನು ಪಡೆಯುವಂತೆ ಆದೇಶ ಹೊರಡಿಸಿದೆ. ಆ ವರದಿಗಳ ಜತೆಗೆ ಜೈಲಿನಲ್ಲಿ ಸುನಿಲ್ ನ ವರ್ತನೆಯ ಆಧಾರದ ಮೇಲೆ ಸುನೀಲ್ ಗೆ ಗಲ್ಲು ಶಿಕ್ಷೆ ವಿಧಿಸಬೇಕೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬೇಕೆ ಎಂಬುದನ್ನು ನಿರ್ಧರಿಸಲಾಗುವುದು.

Share Post