National

ಸುಂದರ್‌ಬನ್ಸ್‌ನಲ್ಲಿ ಹುಲಿ; ಕೊನೆಗೂ ಬಲೆಗೆ ಬಿತ್ತು ರಾಯಲ್‌ ಬೆಂಗಾಲ್‌ ಟೈಗರ್‌

ಸುಂದರ್‌ ಬನ್ಸ್‌: ಕಳೆದ ನಾಲ್ಕು ದಿನಗಳಿಂದ ಜನ ನಿದ್ದೆಗೆಡಿಸಿದ್ದ ರಾಯಲ್‌ ಬೆಂಗಾಲ್‌ ಟೈಗರ್‌ ಕೊನೆಗೂ ಅರಣ್ಯ ಇಲಾಖೆ ಅಧಿಕಾರಿಗಳ ಬಲೆಗೆ ಬಿದ್ದಿದೆ. ಇದರಿಂದಾಗಿ ಸ್ಥಳೀಯರು ನಿಟ್ಟುಸಿರುವ ಬಿಟ್ಟಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಕುಲ್ತಾಲಿ ಗ್ರಾಮದ ಬಳಿ ವ್ಯಕ್ತಿಯೊಬ್ಬರ ಮೇಲೆ ಹುಲಿ ಅಟ್ಯಾಕ್‌ ಮಾಡಿತ್ತು. ಇದರಿಂದಾಗಿ ಆತ ಗಾಯಗೊಂಡು ಆಸ್ಪತ್ರೆ ಸೇರಿದ್ದ. ಹುಲಿ ಸಮೀಪದ ಪಿಯಾಲಿ ನದಿಯ ಸುತ್ತಮುತ್ತ ಓಡಾಡಿಕೊಂಡಿತ್ತು. ಹೀಗಾಗಿ ಸ್ಥಳೀಯರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಹಿಡಿದುಕೊಂಡು ಕಳೆದ ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರು. ಆದರೆ ಹುಲಿ ಸಿಕ್ಕಿರಲಿಲ್ಲ. ಕೊನೆಗೆ ಡ್ರೋಣ್‌ ಮೂಲಕ ಹುಲಿಯ ಚಲನವಲನವನ್ನು ಗಮನಿಸಲಾಯಿತು. ಕೊನೆಗೂ ಹುಲಿ ಬೆಲೆಗೆ ಬಿದ್ದಿದೆ. ನಾಲ್ಕು ದಿನಗಳಿಂದ ಊಟ, ನಿದ್ದೆ ಬಿಟ್ಟಿದ್ದ ಸ್ಥಳೀಯ ಜನರು ಈಗ ನಿಟ್ಟುಸಿರುಬಿಟ್ಟಿದ್ದಾರೆ.

Share Post