BengaluruPolitics

ಸುಳ್ಳಿನ ಸರಮಾಲೆಯ ಸರದಾರ ಈ ಬುರುಡೆರಾಮಯ್ಯ: ಬಿಜೆಪಿ

ಬೆಂಗಳೂರು: ಜನವರಿ ೯ ರಂದು ಕಾಂಗ್ರೆಸ್‌ ಪಕ್ಷ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಹಮ್ಮಿಕೊಂಡಿರುವ ಪಾದಯಾತ್ರೆ ಬಗ್ಗೆ ರಾಜ್ಯ ಬಿಜೆಪಿ ಕುಟುಕಿದೆ. ಈ ಬಗ್ಗೆ ಬುರುಡೆರಾಮಯ್ಯ ಹ್ಯಾಶ್‌ ಟ್ಯಾಗ್‌ ಬಳಸಿ ಟ್ವೀಟ್‌ ಮಾಡಿರುವ ಬಿಜೆಪಿ ಈ ಹಿಂದೆ ಕೃಷ್ಣ ಯೋಜನೆ ಬಗ್ಗೆ ಹೇಳಿದ್ದ ಸುಳ್ಳುಗಳ ಸರಮಾಲೆಯಿಂದ ರಾಜಕಾರಣ ಮಾಡಿದೆ ಎಂದು ಆರೋಪ ಮಾಡಿದೆ.

ನೆಲ-ಜಲ ವಿಚಾರವಾಗಿ ಸಿದ್ದರಾಮಯ್ಯ ಈವರೆಗೆ ಹೇಳಿದ್ದೆಲ್ಲವೂ ಬರೀ ಸುಳ್ಳು. ಕಾಂಗ್ರೆಸ್‌ ನಡಿಗೆ-ಕೃಷ್ಣೆಯ ಕಡೆಗೆ ಎಂದು 2013ರಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ಪಾದಯಾತ್ರೆ ಸಂದರ್ಭದಲ್ಲಿ ಸಿದ್ದರಾಮಯ್ಯ ಹೇಳಿದ್ದ ಸುಳ್ಳುಗಳನ್ನು ನೆನಪು ಮಾಡಬೇಕಾ? ಸುಳ್ಳಿನ ಸರಮಾಲೆ ರೂಪಿಸಿಯೇ ನೀವು ಅಧಿಕಾರಕ್ಕೆ ಬಂದಿದ್ದು ಬುರುಡೆರಾಮಯ್ಯ ಎಂದು ವ್ಯಂಗ್ಯವಾಡಿದ್ದಾರೆ.

2013 ರಲ್ಲಿ ಮುಖ್ಯಮಂತ್ರಿಯಾದಾಗ, ತಾನು ಕೃಷ್ಣಾ ನದಿಯ ತಟದಲ್ಲಿ ನಿಂತು ಆಡಿದ ಮಾತುಗಳನ್ನು #ಬುರುಡೆರಾಮಯ್ಯ ಸಂಪೂರ್ಣ ಮರೆತಿದ್ದಾರೆ. “ವರ್ಷಕ್ಕೆ ಅಲ್ಲಪ್ಪ, ಅದು ಐದು ವರ್ಷಕ್ಕೆ ಹತ್ತು ಸಾವಿರ ಕೋಟಿ “ಎಂದಿದ್ದು ಎಂದು ವಿಷಯಾಂತರ ಮಾಡಿದರು. ದಾಖಲೆ ಮುಂದಿಟ್ಟಾಗ “ಮತಾಂತರ ಕಾಯ್ದೆ” ಸಂದರ್ಭದಲ್ಲಿ ಆದಂತೆ ಪೇಚಿಗೆ ಸಿಲುಕಿದ್ದು ಮರೆತು ಹೋಯ್ತೆ? ನಿಮ್ಮದು ಬರೀ ಸುಳ್ಳಿನ ರಾಜಕಾರಣ ಎಂದು ಸಿದ್ದರಾಮಯ್ಯನವರ ಕಾಲೆಳೆದಿದ್ದಾರೆ.

Share Post