National

ಗಣರಾಜ್ಯೋತ್ಸವ ಸ್ತಬ್ಧಚಿತ್ರ; ರಾಜ್ಯದ ಟ್ಯಾಬ್ಲೋಗೆ 2ನೇ ಸ್ಥಾನ

ನವದೆಹಲಿ: 73ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಪರೇಡ್‌ನಲ್ಲಿ ಭಾಗಿಯಾಗಿದ್ದ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಎರಡನೇ ಸ್ಥಾನ ಸಿಕ್ಕಿದೆ. ಪರೇಡ್‌ನಲ್ಲಿ 12 ರಾಜ್ಯಗಳ ಸ್ತಬ್ಧ ಚಿತ್ರಗಳು ಭಾಗಿಯಾಗಿದ್ದವು. ಇದರಲ್ಲಿ ರಾಜ್ಯದ ಕರಕುಶಲ ವೈಭವ ಸಾರುವ ಸ್ತಬ್ಧಚಿತ್ರಕ್ಕೆ ಎರಡನೇ ಬಹುಮಾನ ಸಿಕ್ಕಿದೆ. ಕೇಂದ್ರ ರಕ್ಷಣಾ ಇಲಾಖೆ ಈ ಮಾಹಿತಿ ನೀಡಿದೆ.

  ಕೇಂದ್ರ ರಕ್ಷಣಾ ಇಲಾಖೆಯ ತಜ್ಞರ ಸಮಿತಿ ರಾಜ್ಯ ಟ್ಯಾಬ್ಲೋವನ್ನು ಆಯ್ಕೆ ಮಾಡಿದೆ. ಮೊದಲ ಸ್ಥಾನ ಉತ್ತರ ಪ್ರದೇಶದ ಸ್ತಬ್ಧಚಿತ್ರಕ್ಕೆ ಸಿಕ್ಕಿದೆ. ಕಾಶಿ ವಿಶ್ವನಾಥ್‌ ಕಾರಿಡಾರ್‌ ಕುರಿತಂತೆ ಉತ್ತರ ಪ್ರದೇಶ ಸರ್ಕಾರ ಸ್ತಬ್ಧಚಿತ್ರ ತಯಾರಿಸಿತ್ತು. ಇನ್ನು ಮೂರನೇ ಸ್ಥಾನ ಮೇಘಾಲಯಕ್ಕೆ ಸಿಕ್ಕಿದೆ.

Share Post