Cinema

ಜೊಮಾಟೊ ಜಾಹೀರಾತಿನಲ್ಲೂ ʻತಗ್ಗೆದೆಲೆ‌ʼ ಅಂತಿರುವ ಸ್ಟೈಲಿಶ್‌ ಸ್ಟಾರ್

ಹೈದರಾಬಾದ್:‌ ಪುಷ್ಪ ಚಿತ್ರದ ಮೂಲಕ  ಅರ್ಜುನ್ ಪ್ಯಾನ್ ಇಂಡಿಯಾ ಐಕಾನ್ ಸ್ಟಾರ್ ಆಗಿದ್ದಾರೆ. ದೀಪ ಆರುವ ಮುನ್ನ ಮನೆಯನ್ನು ಅಚ್ಚುಕಟ್ಟು ಮಾಡಿಕೊಳ್ಳಬೇಕು ಎಂಬ ಗಾದೆ ಈ ಜಾಹೀರಾತಿನಲ್ಲಿ ಮೂಲಕ ಕಂಡುಬಂದಿದೆ. ಫ್ರೂಟಿ, ರ್ಯಾಪಿಡೊ ಜೊತೆಗೆ ರೆಡ್‌ ಬಸ್‌ ಜಾಹೀರಾತು ಮಾಡಿದ್ದ ಬನ್ನಿ ಈಗ ಜೊಮಾಟೋಗೂ ಕಾಲಿಟ್ಟಿದ್ದಾರೆ.

ಜೊಮಾಟೊ ಜಾಹೀರಾತಿನಲ್ಲಿ ಅಲ್ಲು ಅರ್ಜುನ್ ನೀಡಿರುವ ಹೇಳಿಕೆ ಇದೀಗ ವೈರಲ್ ಆಗಿದೆ. ಈ ಜಾಹೀರಾತಿನಲ್ಲಿ ಬನ್ನಿ ಜೊತೆಗೆ ನಟ ಸುಬ್ಬರಾಜು ಕೂಡ ಕಾಣಿಸಿಕೊಂಡಿದ್ದಾರೆ.. ಶೂಟಿಂಗ್ ದೃಶ್ಯದೊಂದಿಗೆ ಹೊಸ ಜಾಹೀರಾತನ್ನು ನಿರ್ಮಾಣ ಮಾಡಲಾಗಿದೆ.  ಫೈಟ್ ಸೀನ್ ನಲ್ಲಿ ಬನ್ನಿ ಸುಬ್ಬರಾಜುರನ್ನು ಗಾಳಿಯಲ್ಲಿ ತೇಲುವಂತೆ ಹೊಡೆಯುತ್ತಾರೆ. ಶಾಟ್ ಸ್ಲೋ ಮೋಷನ್ ನಲ್ಲಿ ತೆಗೆದಿದ್ದಾರೆ ಆಗ ಸುಬ್ಬರಾಜು.. ಬನ್ನಿ ನನ್ನನ್ನು ಕೆಳಗೆ ಇಳಿಸು ನಾನು ಗೊಂಗುರ ಮಟನ್ ತಿನ್ನಬೇಕು ಎಂಬ ಡೈಲಾಗ್ ಹೇಳುತ್ತಾರೆ.

ಅದಕ್ಕೆ ಬನ್ನಿ ಜೊಮಾಟೊ ಯಾವಾಗಲೂ ನಿಮಗಾಗಿ ಇರುತ್ತದೆ. ಜೊಮಾಟೊ ನಿಮಗೆ ಬೇಕಾದುದನ್ನು ಸೂಪರ್‌ ಫಾಸ್ಟ್‌ ಆಗಿ ತಂದುಕೊಡುತ್ತದೆ. ʻಮನಸು ಬಯಸಿದ್ರೆ ತಗ್ಗೆದೆಲೆʼ ಎಂಬ ಡೈಲಾಗ್‌ನೊಂದಿಗೆ ಜಾಹೀರಾತನ್ನು ತೆಗೆಯಲಾಗಿದೆ. ಸದ್ಯ ಈ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪುಷ್ಟ ಲುಕ್ ನಿಂದ ಹೊರಬಂದ ಬನ್ನಿ ಈಗ ಹೊಸದಾಗಿ ಕಾಣಿಸಿಕೊಂಡಿದ್ದಾರೆ.

Share Post