National

HIJAB; ತೆಲಂಗಾಣಕ್ಕೂ ಕಾಲಿಟ್ಟ ಹಿಜಾಬ್‌ ವಿವಾದ; ಮಲ್ಲೇಪಲ್ಲಿಯಲ್ಲಿ ಪ್ರತಿಭಟನೆ

ಹೈದರಾಬಾದ್‌: ಹಿಜಾಬ್‌ ವಿವಾದ ಪಕ್ಕದ ತೆಲಂಗಾಣಕ್ಕೂ ಕಾಲಿಟ್ಟಿದೆ. ಕರ್ನಾಟಕದಲ್ಲಿ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಬರುವುದಕ್ಕೆ ಆಕ್ಷೇಪ ವ್ಯಕ್ತವಾಗಿರುವುದರ ವಿರುದ್ಧ ಇಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ತೆಲಂಗಾಣದ ಮಲ್ಲೇಪಲ್ಲಿಯ ಅನ್ವರುಲ್‌ ಉಲೂಮ್‌ ಕಾಲೇಜಿನ ವಿದ್ಯಾರ್ಥಿಗಳು ಬ್ಯಾನರ್‌ ಹಿಡಿದು ಹಿಜಾಬ್‌ ಪರವಾಗಿ ಪ್ರತಿಭಟನೆ ನಡೆಸಿದರು. ಕಾಲೇಜಿನ ಬಳಿ ಸೇರಿದ ವಿದ್ಯಾರ್ಥಿಗಳು ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಮುಸ್ಲಿಂ ವಿದ್ಯಾರ್ಥಿನಿಯರು ಕರ್ನಾಟಕದಲ್ಲಿ ಕಾಲೇಜಿಗೆ ಹಿಜಾಬ್‌ ಧರಿಸಿ ಬರುತ್ತಿದ್ದರು. ಆದ್ರೆ ಶಾಲೆ-ಕಾಲೇಜುಗಳಲ್ಲಿ ಸಮಾನತೆ ಪಾಲಿಸಬೇಕು ಎಂದು ಕೆಲವರು ವಾದ ಮಂಡಿಸುತ್ತಿದ್ದಾರೆ. ಅದಕ್ಕಾಗಿ ಹಿಜಾಬ್‌ ವಿರೋಧಿಸುತ್ತಿದ್ದಾರೆ. ಈ ನಡುವೆ ಹಿಜಾಬ್‌ ವಿರುದ್ಧವಾಗಿ ಕೆಲವರು ಕೇಸರಿ ಶಾಲು ಹಾಕಿಕೊಂಡು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಿವಾದ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

 

Share Post