CrimeNational

ಕುಡಿಯಬೇಡ ಎಂದಿದ್ದಕ್ಕೆ ಇಟ್ಟಿಗೆಯಿಂದ ಹೊಡೆದು ತಂದೆಯ ಕೊಲೆ!

ಗೋರಖ್​ಪುರ; ಮಗ ವಿಪರೀತ ಕುಡಿಯುತ್ತಿದ್ದ.. ಬೆಳಗ್ಗೆಯಾಗುತ್ತಿದ್ದಂತೆ ಕಂಠಪೂರ್ತಿ ಕುಡಿದು ತೂರಾಡುತ್ತಿದ್ದ.. ಹೀಗಾಗಿ ಕುಡಿಯಬೇಡ ಎಂದು ತಂದೆ ಬುದ್ಧಿ ಹೇಳಿದ್ದಾರೆ.. ಇದರಿಂದ ರೊಚ್ಚಿಗೆದ್ದ ಮಗ ಇಟ್ಟಿಗೆಯಿಂದ ತಂದೆಯ ತಲೆಗೆ ಹೊಡೆದು ಬೀದಿಯಲ್ಲೇ ಕೊಲೆ ಮಾಡಿದ್ದಾನೆ..
ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಈ ಘಟನೆ ನಡೆದಿದೆ.. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದಾಗಿ ಅಪ್ಪ ಸಾವನ್ನಪ್ಪಿದ್ದಾನೆ.. ಪ್ರಕಾಶ್‌ ತಿವಾರಿ ಎಂಬುವವರೇ ಮಗನಿಂದ ಕೊಲೆಯಾದವರು.. ಮಗ ಕನ್ಹಯ್ಯಾ ತಿವಾರಿ ಹೆತ್ತ ತಂದೆಗೇ 20 ಕ್ಕೂ ಹೆಚ್ಚು ಬಾರಿ ಇಟ್ಟಿಗೆಯಿಂದ ಹೊಡೆದು ಸಾಯಿಸಿದ್ದಾನೆ..
ತಂದೆಯನ್ನು ಕೊಲೆ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಬಿಂಬಿಸಲು ಹೊರಟಿದ್ದಾನೆ.. ಮನೆಯಲ್ಲಿ ಅಪ್ಪನ ಶವವನ್ನು ಫ್ಯಾನ್‌ಗೆ ನೇತುಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಬಿಂಬಿಸಲು ಹೊರಟಿದ್ದನು.. ಆದ್ರೆ ಪೊಲೀಸರ ವಿಚಾರಣೆಯಲ್ಲಿ ನಿಜ ಬಯಲಾಗಿದೆ.. ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ..

Share Post