National

ಬಿಜೆಪಿ ಸಂಸದೆ ಪ್ರಗ್ಯಾಸಿಂಗ್‌ ಸಿಂಗ್‌ಗೆ ದಾವೂದ್‌ ಕಡೆಯವರಿಂದ ಕೊಲೆ ಬೆದರಿಕೆ

ಭೋಪಾಲ್; ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್‌ ಅವರಿಗೆ ಕೊಲೆ ಬೆದರಿಕೆ ಬಂದಿದೆ. ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಸಹೋದರ ಇಕ್ಬಾಲ್‌ ಕಸ್ಕರ್‌ ಸಹಚರನಿಂದ ಕೊಲೆ ಬೆದರಿಕೆ ಕರೆ ಬಂದಿರುವುದಾಗಿ ಭೋಪಾಲ್‌ನ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್‌ ಠಾಕೂರ್ ಅವರು ದೂರು ನೀಡಿದ್ದಾರೆ.

ಪ್ರಗ್ಯಾ ಸಿಂಗ್‌ ಅವರಿಗೆ ಕರೆ ಮಾಡಿದ ಕಸ್ಕರ್‌ನ ಸಹಚರ ಎನ್ನಲಾದ ವ್ಯಕ್ತಿ, ನೀವು ಮುಸ್ಲಿಮ್‌ ಸಮುದಾಯವನ್ನು ಗುರಿಯಾಗಿಸಿಕೊಂಡು ವಿಷಬೀಜ ಹರಡುತ್ತಿದ್ದೀರಿ. ಹೀಗಾಗಿ ಕೊಲೆ ಮಾಡುವುದಾಗಿ ಹೇಳಿದ್ದಾನೆ ಎಂದು ಟಿ.ಟಿ ನಗರ ಪೊಲೀಸ್‌ ಠಾಣೆಯ ಪ್ರಭಾರಾಧಿಕಾರಿ ಚೆನ್‌ ಸಿಂಗ್‌ ರಘುವಂಶಿ ತಿಳಿಸಿದ್ದಾರೆ. ಕೊಲೆ ಬೆದರಿಕೆ ಹಾಕಿರುವ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ 506 (ಅಪರಾಧ ಬೆದರಿಕೆ) ಹಾಗೂ 507ಗಳ (ಅನಾಮಧೇಯ ಸವಹನದಿಂದ ಅಪರಾಧ ಬೆದರಿಕೆ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Share Post