CrimeNational

ಮಹಾತ್ಮಾ ಗಾಂಧಿ ಮರಿಮೊಮ್ಮಗ ತುಷಾರ್‌ ಗಾಂಧಿ ಅರೆಸ್ಟ್‌

ಮುಂಬೈ; ಇಂದು ಕ್ವಿಟ್‌ ಇಂಡಿಯಾ ದಿನ.. ಈ ಹಿನ್ನೆಲೆಯಲ್ಲಿ ಮುಂಬೈನ ಕ್ರಾಂತಿ ಮೈದಾನಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಪೊಲೀಸರು ಮಹಾತ್ಮಾಗಾಂಧಿ ಮರಿಮೊಮ್ಮಗ ತುಷಾರ್‌ ಗಾಂಧಿ ಅರೆಸ್ಟ್‌ ಆಗಿದ್ದಾರೆ. ಈ ವಿಚಾರವನ್ನು ತುಷಾರ್‌ ಗಾಂಧಿಯಯವರೇ ತಮ್ಮ ಟ್ವಿಟರ್‌ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಕ್ವಿಟ್‌ ಇಂಡಿಯಾ ದಿನದ ನೆನಪಿಗಾಗಿ ನಾನು ಕ್ರಾಂತಿ ಮೈದಾನಕ್ಕೆ ಹೊರಟಿದ್ದೆ, ಆದ್ರೆ ಸಾಂತಾಕ್ರೂಜ್‌ ಪೊಲೀಸರು ನನ್ನ ಅರ್ಧ ದಾರಿಯಲ್ಲೇ ಬಂಧಿಸಿದ್ದಾರೆ. ಇಂತಹ ದಿನದಂದೇ ನನ್ನನ್ನು ಬಂಧನ ಮಾಡಿರುವುದು ನನಗೆ ಹೆಮ್ಮೆ ಅಂತಾ ತುಷಾರ್‌ ಹೇಳಿದ್ದಾರೆ.

ಕ್ರಾಂತಿ ಮೈದಾನದಲ್ಲಿ ಇಂದು ಮೌನ ಮೆರವಣಿಗೆ ಆಯೋಜಿಸಲಾಗಿತ್ತು. ಆದ್ರೆ ಪೊಲೀಸರು ಇದಕ್ಕೆ ಅವಕಾಶ ನೀಡಿರಲಿಲ್ಲ. ಆದರೂ ತುಷಾರ್‌ ಗಾಂಧಿಯವರು ಅಲ್ಲಿಗೆ ಹೋಗಲು ಪ್ರಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದಿದ್ದೇವೆ ಎನ್ನುತ್ತಾರೆ ಪೊಲೀಸರು. ಇತ್ತ ತುಷಾರ್‌ ಏನೇ ಆಗಲೀ ನನ್ನನ್ನು ಪೊಲೀಸರು ಬಿಡುಗಡೆ ಮಾಡಿದರೆ ನಾನು ಕ್ರಾಂತಿ ಮೈದಾನಕ್ಕೆ ಹೋಗಿಯೇ ತೀರುತ್ತೇನೆ ಎಂದು ಹೇಳುತ್ತಿದ್ದಾರೆ.

Share Post