NationalPolitics

ಮೋದಿ ಬಯಸಿದರೆ ಜೈಲಿಗೆ ಹೋಗಲು ನಾನು ಸಿದ್ಧ; ರಾಹುಲ್‌ ಗಾಂಧಿ

ನವದೆಹಲಿ; ಪ್ರಧಾನಿ ನರೇಂದ್ರ ಮೋದಿಯವರು ಬಯಸಿದರೆ ನಾನು ಜೈಲಿಗೆ ಹೋಗಲು ಸಿದ್ಧನಿದ್ದೇನೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಿದ ಅವರು, ನಾನು ಇಂದು ಮಣಿಪುರದ ಬಗ್ಗೆ ಮಾತನಾಡುತ್ತೇವೆ. ಮಣಿಪುರದಲ್ಲಿ ಇಷ್ಟೆಲ್ಲಾ ನಡೆದರೂ ಪ್ರಧಾನಿ ಮೋದಿ ಅಲ್ಲಿಗೆ ಹೋಗಲಿಲ್ಲ. ಮಣಿಪುರವನ್ನು ನೀವು ಇಬ್ಭಾಗ ಮಾಡಿದ್ದೀರಿ ಎಂದು ಹೇಳಿದರು.

ಪ್ರಧಾನಿಗೆ ಮಣಿಪುರ ಹಿಂದೂಸ್ತಾನ್‌ ಅಲ್ಲ. ಭಾರತ ಮಾತೆಯನ್ನು ನೀವು ಹತ್ಯೆ ಮಾಡಿದ್ದೀರಿ ಎಂದು ರಾಹುಲ್‌ ಗಾಮಧಿ ಆಕ್ರೋಶ ಹೊರಹಾಕಿದರು. ನಾನು ಹತ್ತು ವರ್ಷಗಳ ಕಾಲ ನಿಂದನೆಗ ಒಳಗಾದೆ. ಯಾಕೆ ಹೀಗಾಯ್ತು ಎಂದು ಅರ್ಥ ಮಾಡಿಕೊಳ್ಳುವುದಕ್ಕಾಗಿ ನಾನು ಭಾರತ್‌ ಜೋಡೋ ಯಾತ್ರೆ ಮಾಡಿದೆ. ಭಾರತ ಎಲ್ಲರ ಅಹಂಕಾರವನ್ನು ನಿರ್ಮೂಲನೆ ಮಾಡುತ್ತದೆ. ಭಾರತ್‌ ಜೋಡೋ ಯಾತ್ರೆ ಕೈಗೊಂಡ ನನಗೆ ಮೊದಲೆರಡು ದಿನಗಳಲ್ಲೇ ಅಹಂಕಾರ ಹೋಯಿತು. ಭಾರತ್‌ ಜೋಡೋ ಯಾತ್ರೆಯಲ್ಲಿ ನಾನು ನಿಜ ಭಾರತವನ್ನು ನೋಡಿದ್ದೇವೆ, ಅರಿತಿದ್ದೇನೆ ಎಂದು ರಾಹುಲ್‌ ಗಾಂಧಿ ಹೇಳಿದರು.

ನಾನು 130 ದಿನಗಳ ಕಾಲ ಭಾರತ್‌ ಜೋಡೋ ಯಾತ್ರೆ ಮಾಡಿದ್ದೇವೆ. ಇದರಿಂದ ಭಾರತವನ್ನು ಅರಿತಿದ್ದೇನೆ. ನನ್ನ ಸಂಸತ್‌ ಸ್ಥಾನವನ್ನು ಅನರ್ಹಗೊಳಿಸಲಾಗಿತ್ತು. ಇದೀಗ ವಾಪಸ್‌ ಕೊಟ್ಟಿದ್ದಾರೆ. ಸ್ಪೀಕರ್‌ ಅವರಿಗೆ ಧನ್ಯವಾದಗಳು ಎಂದೂ ರಾಹುಲ್‌ ಹೇಳಿದ್ದಾರೆ.

 

Share Post