National

ಚಾಪರ್‌ ದುರಂತದಲ್ಲಿ ಮೃತಪಟ್ಟ ಐವರ ಗುರುತು ಪತ್ತೆ

ನವದೆಹಲಿ: ತಮಿಳುನಾಡಿನ ಕೂನೂರು ಬಳಿ ನಡೆದ ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟ ಐವರು ಸೇನಾಧಿಕಾರಿಗಳ ಗುರುತು ಸಿಕ್ಕಿದೆ. ಇಲ್ಲಿಯವರೆಗೂ ೧೧ ಅಧಿಕಾರಿಗಳ ಗುರುತು ಪತ್ತೆಯಾಗಿದ್ದು, ಇನ್ನುಳಿದ ಮೃದೇಹಗಳನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತಪಟ್ಟವರು  ಜೆಡಬ್ಲ್ಯೂಒ ಪ್ರದೀಪ್‌, ಜೆಡಬ್ಲ್ಯೂಒ ರಾಣಾ ಪ್ರತಾಪ್‌ ದಾಸ್, ಲ್ಯಾನ್ಸ್‌ ನಾಯಕ್‌ ಬಿ.ಸಾಯಿತೇಜಾ, ಲ್ಯಾನ್ಸ್‌ ನಾಯಕ್‌ ವಿವೇಕ್‌ ಕುಮಾರ್‌ ಮತ್ತು ವಿಂಗ್‌ ಕಮಾಂಡರ್‌ ಪಿ.ಎಸ್.ಚೌಹಾಣ್‌  ಎಂದು ಗುರುತು ಹಿಡಿಯಲಾಗಿದೆ. ಮೃತದೇಹಗಳನ್ನು ಸಕಲ ಸೇನಾ ಗೌರವಗಳೊಂದಿಗೆ ಅವರವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

Share Post