National

ಟಿಟಿಡಿಗೆ ನೂತನ ಅಧ್ಯಕ್ಷ ನೇಮಕ; ಶಾಸಕ ಭೂಮನ ರೆಡ್ಡಿ ನೂತನ ಅಧ್ಯಕ್ಷ

ಅಮರಾವತಿ; ತಿರುಮಲ ತಿರುಪತಿ ದೇವಸ್ಥಾನ ಮಂಡಳಿಗೆ ಅಧ್ಯಕ್ಷರ ಬದಲಾವಣೆ ಮಾಡಲಾಗಿದೆ. ಶಾಸಕ ಭೂಮನ ಕರುಣಾಕರ ರೆಡ್ಡಿ ಅವರನ್ನು ಟಿಟಿಡಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಇದೇ ಎಂಟನೇ ತಾರೀಖು ಅವರು ಟಿಟಿಡಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಭೂಮನ ಕರುಣಾಕರ ರೆಡ್ಡಿಯವರು ತಿರುಪತಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಅವರನ್ನೇ ಟಿಟಿಡಿ ಅಧ್ಯಕ್ಷರಾಗಿ ಮಾಡಲಾಗಿದೆ. ಇನ್ನು ದೇವಾಲಯ ಮಂಡಳಿಗೆ ಶೀಘ್ರವೇ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

Share Post