National

ವಾಟರ್‌ ಟ್ಯಾಂಕ್‌ನಲ್ಲಿ ಕೊಳೆತ ಮೃತದೇಹ; ಅದೇ ನೀರು ಕುಡಿಯುತ್ತಿದ್ದ ಜನ..!

ಹೈದರಾಬಾದ್‌: ಇಲ್ಲಿನ ರೇಸಲಗಡ್ಡ ಜಲಾಗಾರದ ಮುನ್ಸಿಪಲ್‌ ವಾಟರ್‌ ಟ್ಯಾಂಕ್‌ನಲ್ಲಿ ಕೊಳೆತು ನಾರುತ್ತಿದ್ದ ಶವವೊಂದು ಪತ್ತೆಯಾಗಿದೆ. ಟ್ಯಾಂಕ್‌ ಸ್ವಚ್ಛ ಮಾಡುವ ವೇಳೆ ಈ ಮೃತದೇಹ ಪತ್ತೆಯಾಗಿದೆ. ಟ್ಯಾಂಕ್‌ನಲ್ಲಿ ವ್ಯಕ್ತಿ ಸಾವನ್ನಪ್ಪಿ ಸುಮಾರು ದಿನಗಳಾಗಿದ್ದು, ಜನರು ಗೊತ್ತಿಲ್ಲದೆ ಇದೇ ನೀರನ್ನೇ ಕುಡಿಯುತ್ತಿದ್ದರೆಂದು ತಿಳಿದು ಬಂದಿದೆ.

ಶವ ಟ್ಯಾಂಕ್‌ನಲ್ಲಿ ಹೇಗೆ ಬಂತೋ ಗೊತ್ತಿಲ್ಲ. ಯಾರಾದರೂ ಸಾಯಿಸಿ ಟ್ಯಾಂಕ್‌ಗೆ ಹಾಕಿದರಾ ಅಥವಾ ಆತ್ಮಹತ್ಯೆಯೋ ಗೊತ್ತಾಗಿಲ್ಲ. ಆದರೆ, ಟ್ಯಾಂಕ್‌ ಸ್ವಚ್ಛತೆ ವೇಳೆ ಸತ್ತು ತುಂಬಾ ದಿನಗಳಾಗಿದ್ದ ಶವ ಪತ್ತೆಯಾಗಿದೆ. ಹಲವು ದಿನಗಳಿಂದ ಟ್ಯಾಂಕ್‌ನಲ್ಲೇ ಶವ ಕೊಳೆತಿದೆ. ಅದೇ ನೀರು ಸುತ್ತಮುತ್ತಲ ಪ್ರದೇಶಗಳಿಗೆ ಪೂರೈಕೆಯಾಗಿದ್ದು, ಜನ ಅದೇ ನೀರನ್ನು ಸೇವಿಸಿದ್ದಾರೆ.

ಸ್ವಚ್ಛತೆ ಮಾಡುವವರು ಶವವನ್ನು ನೋಡಿ, ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಪೊಲೀಸರು ಬಂದ ನಂತರ ಮೃತದೇಹವನ್ನು ಹೊರೆತೆಗೆಯಲಾಗಿದೆ. ಮುಶಿರಾಬಾದ್‌ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Share Post