National

ಒಂದೇ ಕುಟುಂಬದ ಮೇಲೆ ಹಾವಿನ ದ್ವೇಷ; ಮೂವರಿಗೆ ಎರಡೆರಡು ಬಾರಿ ಕಚ್ಚಿದ ಹಾವು

ಚಿತ್ತೂರು; ಒಂದು ತಿಂಗಳಲ್ಲಿ ಒಂದೇ ಹಾವು ಒಂದೇ ಕುಟುಂಬದ ಮೂವರನ್ನು ಎರಡೆರಡು ಬಾರಿ ಕಚ್ಚಿದೆ. ದ್ವೇಷ ಸಾಧಿಸುತ್ತಿವೆ ಎಂಬ ರೀತಿಯಲ್ಲಿ ನಾಗರ ಹಾವು, ಪದೇ ಪದೇ ಒಂದೇ ಕುಟುಂಬದವರ ಮೇಲೆ ದಾಳಿ ಮಾಡುತ್ತಿದೆ. ಈ ಘಟನೆ ನಡೆದಿರೋದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ವಲಯದಲ್ಲಿ.

  ಇಲ್ಲಿನ ಡೋರ್ನಕಂಬಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚಂದ್ರಗಿರಿ ಬರುತ್ತದೆ. ಇಲ್ಲಿನ ನಿವಾಸಿಗಳಾದ ವೆಂಕಟೇಶ್ ಮತ್ತು ವೆಂಕಟಮ್ಮ ಹಾಗೂ ಅವರ ಮಗ ಜಗದೀಶ್ ಎಂಬುವವರೇ ಹಾವಿನ ದ್ವೇಷದಿಂದ ಸಂಕಷ್ಟ ಅನುಭವಿಸುತ್ತಿರುವವರು. ಇವರು ಕೃಷಿಕರಾಗಿದ್ದು, ಕಳೆದ ತಿಂಗಳು ಮೂವರಿಗೂ ಹಾವು ಕಚ್ಚಿತ್ತು. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆ ದಾಖಲಿಸಿದ್ದರು. ಮೂವರು ಎರಡು ದಿನಗಳ ಹಿಂದೆಯಷ್ಟೇ ಮನೆಗೆ ವಾಪಸ್ಸಾಗಿದ್ದರು.

    ಆದರೆ, ಇವರು ಬಂದ ಕೂಡಲೇ ಮತ್ತೆ ಹಾವು ದಾಳಿ ಮಾಡಿದೆ. ಮೊದಲು ವೆಂಕಟೇಶ್‌ ಅವರಿಗೆ ಹಾವು ಕಚ್ಚಿದೆ. ಅನಂತರ ವೆಂಕಟಪ್ಪ ಹಾಗೂ ಜಗದೀಶ್‌ಗೆ ಹಾವು ಕಚ್ಚಿದೆ. ಈಗ ಮೂವರೂ ತಿರುಪತಿಯಲ್ಲಿನ ರುವಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

Share Post