National

A terrible accident; ನೆಲ್ಲೂರು ಬಳಿ ಭೀಕರ ಅಪಘಾತ; 7 ಮಂದಿ ದುರ್ಮರಣ, 15 ಮಂದಿ ಗಂಭೀರ

ವಿಜಯವಾಡ; ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ಅಪಘಾತಗಳು ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೇ ವಿಜಯವಾಡದ ಬಳಿ ಭೀಕರ ಅಪಘಾತವೊಂದು ನಡೆದಿತ್ತು. ಇದೀಗ ನೆಲ್ಲೂರು ಜಿಲ್ಲೆಯಲ್ಲಿ ಭಯಂಕರವಾದಂತಹ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ; Pakistan Election; ಗೆಲುವು ಇಮ್ರಾನ್‌ ಖಾನ್‌ ಅವರದ್ದಾ, ನವಾಜ್‌ ಷರೀಫ್‌ ಅವರದ್ದಾ..?

ನಿಂತಿದ್ದ ಲಾರಿಗೆ ಲಾರಿ ಹಾಗೂ ಬಸ್‌ ಡಿಕ್ಕಿ

ಕವಲಿ ಟೋಲ್‌ ಪ್ಲಾಜಾ ಬಳಿ ಲಾರಿಯೊಂದು ನಿಂತಿತ್ತು. ಈ ವೇಳೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಇದಾಗುತ್ತಿದ್ದಂತೆ ಇದೇ ವೇಳೆ ಬಂದ ಬಸ್‌ ಒಂದು ಎರಡೂ ಲಾರಿಗಳನ್ನು ಗುದ್ದಿದೆ. ಪರಿಣಾಮವಾಗಿ, ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿ ಎಂದು ತಿಳಿದುಬಂದಿದೆ.

ಇದನ್ನೂ ಓದಿ;Fingering in the nose; ಮೂಗಲ್ಲಿ ಬೆರಳಿಟ್ಟುಕೊಂಡರೆ ಮರೆವು ಕಾಯಿಲೆ ಗ್ಯಾರೆಂಟಿ!

ಮೂರೂ ವಾಹನಗಳ ಡ್ರೈವರ್‌ಗಳ ದುರ್ಮರಣ

ಅಪಘಾತಕ್ಕೀಡಾ ಎರಡೂ ಲಾರಿಗಳ ಡ್ರೈವರ್‌ಗಳು ಸಾವನ್ನಪ್ಪಿದ್ದಾರೆ. ಬಸ್‌ ಚಾಲಕ ಕೂಡಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದರ ಜೊತೆಗೆ ಬಸ್‌ನಲ್ಲಿದ್ದ 4 ಪ್ರಯಾಣಿಕರು ಕೂಡಾ ಸ್ಥಳದಲ್ಲೇ ಇಹಲೋಕ ತ್ಯಜಿಸಿದ್ದಾರೆ. 15 ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಬಸ್‌ ಎವಿ ಕಾವೇರಿ ಟ್ರಾವೆಲ್ಸ್​ಗೆ ಸೇರಿದ್ದೆಂದು ತಿಳಿದುಬಂದಿದೆ. ಈ ಬಸ್​ ಚೆನ್ನೈಯಿಂದ ಹೈದರಾಬಾದ್​ಗೆ ಹೋಗುತ್ತಿತ್ತು. ಇದು ಕವಲಿ ಪ್ಲಾಜಾ ಬಳಿ ಬಂದಾಗಿ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ; ED Raids; ಬಳ್ಳಾರಿ ಕಾಂಗ್ರೆಸ್‌ ಶಾಸಕ ನಾರಾ ಭರತ್‌ರೆಡ್ಡಿ ಮನೆ ಮೇಲೆ ಇಡಿ ದಾಳಿ

Share Post