EconomyNational

ಮುಂದಿನ 25 ವರ್ಷ ಭಾರತಕ್ಕೆ ಅಮೃತ ಕಾಲ; ಪ್ರಧಾನಿ ನರೇಂದ್ರ ಮೋದಿ

ಗಾಂಧಿನಗರ; ಸ್ವಾತಂತ್ರ್ಯ ಶತಮಾನೋತ್ಸವದ ವೇಳೆಗೆ ಭಾರತವನ್ನು ಮುಂದುವರಿದ ದೇಶವನ್ನಾಗಿ ಮಾಡುವುದೇ ನಮ್ಮ ಸಂಕಲ್ಪ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಗಾಂಧಿನಗರದಲ್ಲಿ ಇಂದು ಅವರು 10ನೇ ಆವೃತ್ತಿಯ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮಿಟ್ ಆರಂಭವಾಗಿದೆ. ಇದನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಮುಂದಿನ 25 ವರ್ಷ ಭಾರತದ ಅಮೃತ ಕಾಲವಾಗಿದೆ. ಅಷ್ಟರಲ್ಲಿ ನಮ್ಮ ದೇಶ ಮುಂದುವರೆದ ದೇಶವಾಗಲಿದೆ. ಆ ನಿಟ್ಟಿನಲ್ಲಿ ದೇಶ ಕಾರ್ಯನಿರತವಾಗಿದೆ ಎಂದೂ ಪ್ರಧಾನಿ ಹೇಳಿದ್ದಾರೆ. ಮುಂಬರುವ ಕೆಲ ವರ್ಷಗಳಲ್ಲಿ ಭಾರತದ್ದು ಮೂರನೇ ಅತಿದೊಡ್ಡ ಆರ್ಥಿಕತೆ ಆಗಲಿದೆ ಎಂದು ಎಲ್ಲಾ ಪ್ರಮುಖ ಏಜೆನ್ಸಿಗಳು ಹೇಳಿವೆ. ಕಳೆದ ಒಂದು ದಶಕದಲ್ಲಿ ಭಾರತದ ಆರ್ಥಿಕತೆ ಬೆಳೆದಿರುವ ರೀತಿ ನೋಡಿದರೆ ವಿಶ್ವಾಸ ಮೂಡುತ್ತದೆ ಎಂದೂ ಮೋದಿ ಹೇಳಿದ್ದಾರೆ.

Share Post