CrimeNational

ಅನ್ಯಧರ್ಮೀಯಳನ್ನು ಮದುವೆಯಾಗಿದ್ದಕ್ಕೆ ಕೊಂದು ಪೀಸ್‌ ಪೀಸ್‌ ಮಾಡಿದರು..!

ಹಿಮಾಚಲ; ಅನ್ಯಧರ್ಮೀಯರ ಪ್ರೀತಿ ವಿಚಾರದಲ್ಲಿ ನೈತಿಕ ಪೊಲೀಸ್‌ಗಿರಿ ನಡೆಸೋ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. ಆದ್ರೆ ಹಿಮಾಚಲ ಪ್ರದೇಶದಲ್ಲಿ ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ ಅನ್ನೋ ಕಾರಣಕ್ಕೆ ಆ ಯುವಕನನ್ನೊ ಕೊಂದು ಪೀಸ್‌ ಪೀಸ್‌ ಆಗಿ ಕತ್ತರಿಸಲಾಗಿದೆ. ನಂತರ ಆ ದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಚರಂಡಿಗೆ ಎಸೆಯಲಾಗಿದೆ.

ಚಂಬಾ ಬಳಿ ಈ ಕೃತ್ಯ ಎಸಗಲಾಗಿದೆ. ಹಿಂದೂ ಯುವಕ ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಷಯ ತಿಳಿದ ಯುವತಿಯ ಕಡೆಯವರು, ಆರೋಪಿಯನ್ನು ಕಿಡ್ನ್ಯಾಪ್‌ ಮಾಡಿದ್ದರು. ಜೂನ್‌ ಆರರಂದು ಯುವಕ ಮನೋಹರ್‌ ನಾಪತ್ತೆಯಾಗಿದ್ದ. ಜೂನ್‌ 9ರಂದು ಮನೋಹರ್‌ ಮೃತದೇಹ ಚರಂಡಿಯಲ್ಲಿ ಸಿಕ್ಕ ಗೋಣಿಚೀಲದಲ್ಲಿ ಸಿಕ್ಕಿದೆ. ಈ ಸಂಬಂಧ ಶಬೀರ್, ಮುಸಾಫಿರ್ ಹುಸೇನ್ ಹಾಗೂ ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.

ಯುವಕ ಮನೋಹರ್‌ನನ್ನು ಕೊಲೆ ಮಾಡಿದ ನಂತರ ದೇಹವನ್ನು ಎಂಟು ತುಂಡುಗಳನ್ನು ಕತ್ತರಿಸಲಾಗಿದ್ದು, ಆ ತುಂಡು ಗೋಣಿ ಚೀಲಕ್ಕೆ ತುಂಬಿದ್ದಾರೆ. ಘಟನೆ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Share Post