HealthNational

ಚೇಳು ಕಚ್ಚಿದರೂ ಭಯದಿಂದ ಹೇಳಲಿಲ್ಲ; ಸಾವನ್ನಪ್ಪಿದ ಬಾಲಕ!

ವಿಜಯವಾಡ(Vijayawada); ಹತ್ತು ವರ್ಷದ ಬಾಲಕನಿಗೆ ಆಟ ಆಡುವಾಗ ಚೇಳು ಕಚ್ಚಿದ್ದು, ಇದನ್ನು ತಾಯಿಗೆ ಹೇಳಿದರೆ ಬೈಯ್ಯುತ್ತಾಳೆ ಎಂಬ ಭಯದಿಂದ ಆತ ಹಾಗೇ ಇದ್ದ.. ಇದರಿಂದಾಗಿ ವಿಷ ಮೈಗೆ ಹತ್ತಿ ಆ ಬಾಲಕ ಮೃತಪಟ್ಟಿದ್ದಾನೆ.. ಆಂಧ್ರಪ್ರದೇಶದ ವಿಜಯವಾಡದಲ್ಲಿ ಈ ಘಟನೆ ನಡೆದಿದೆ..

ಇದನ್ನೂ ಓದಿ; ಬರೀ 6 ಸಾವಿರಕ್ಕೆ ಹೆಣ್ಣು ಮಗುವನ್ನು ಮಾರಿದ ಮಹಾತಾಯಿ!

ಚರಣ್‌ ಎಂಬ ಹತ್ತು ವರ್ಷದ ಬಾಲಕನೇ ಸಾವನ್ನಪ್ಪಿದಾತ.. ಈತ ಮನೆಯ ಹೊರಗೆ ಆಟವಾಡುತ್ತಿದ್ದಾಗ ಚೇಳು ಕಚ್ಚಿದೆ.. ಆದ್ರೆ ಇದನ್ನು ತಾಯಿಗೆ ಅಥವಾ ಮನೆಯವರಿಗೆ ಹೇಳಿದರೆ ಬೈಯ್ಯುತ್ತಾರೆ ಎಂಬ ಭಯದಿಂದ ಯಾರಿಗೂ ಹೇಳಿಲ್ಲ.. ಎಷ್ಟೇ ನೋವಾದರೂ ತಡೆದುಕೊಂಡಿದ್ದಾನೆ.. ಆದ್ರೆ, ಚೇಳು ಕಚ್ಚಿದ ಎಷ್ಟೋ ಗಂಟೆಗಳ ನಂತರ ನೋವು ವಿಪರೀತವಾಗಿ ತಡೆಯದಂತಾಗಿದೆ.. ಈ ವೇಳೆ ಆತ ಪೋಷಕರು ವಿಷಯ ತಿಳಿಸಿದ್ದಾನೆ.. ಇದರಿಂದ ಆತಂಕಗೊಂಡ ಪೋಷಕರು, ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದಾರೆ.. ಆದ್ರೆ ಅಷ್ಟರಲ್ಲಾಗಲೇ ವಿಷ ಇಡೀ ದೇಹ ಆವರಿಸಿತ್ತು.. ವಿಷದಿಂದಾಗಿ ಬಾಲಕನ ಬಹುಅಂಗಾಂಗ ವೈಫ್ಯವಾಗಿತ್ತು.. ಈ ಹಿನ್ನೆಲೆಯಲ್ಲಿ ಆತ ಮೃತಪಟ್ಟಿದ್ದಾನೆ..

ಇದನ್ನೂ ಓದಿ; ಬೆಟ್ಟಿಂಗ್‌ ಆಡಿ ಲಾಸ್‌ ಆಗಿದ್ದೀರಾ..?; ಬದುಕು ಗೆಲ್ಲೋದಕ್ಕೆ ಇದ್ದೇಇದೆ ದಾರಿ…

Share Post