DistrictsHealth

ದೇವರ ದರ್ಶನ ಪಡೆಯುತ್ತಿದ್ದಾನಂತೆಯೇ ಮೃತಪಟ್ಟ ಅಂಜನಾದ್ರಿ ಭಕ್ತ!

ಕೊಪ್ಪಳ; ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದ ರಾಜಸ್ಥಾನ ಭಕ್ತ ದೇವರ ದರ್ಶನ ಪಡೆದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾನೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಈ ಘಟನೆ ನಡೆದಿದೆ.

  ಭಕ್ತ ಭಾಗಚಂದ್ ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳಿಗೆ ಪ್ರವಾಸ ಬಂದಿದ್ದರು. ಅದೇ ರೀತಿ ಅಂಜನಾದ್ರಿ ಬೆಟ್ಟಕ್ಕೂ ಭೇಟಿ ಕೊಟ್ಟಿದ್ದರು. 63 ವರ್ಷದ ಅವರು ಆಂಜನೇಯನ ದರ್ಶನ ಪಡೆದ ಕೆಲ ಹೊತ್ತಿನಲ್ಲೇ ಸಾವನ್ನಪ್ಪಿದ್ದಾರೆ..

    ಭಕ್ತ ಭಾಗಚಂದ್ ಠಾಕ್(63) ಅವರು ಇಳಿ ವಯಸ್ಸಿನಲ್ಲೂ 575 ಮೆಟ್ಟಿಲುಗಳನ್ನು ಹತ್ತಿ ಬಂದಿದ್ದರು. ದೇವರ ದರ್ಶನ ಪಡೆದು ಹೊರಗೆ ಬಂದಾಗ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

Share Post