CrimeDistricts

ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಮೆಂಟ್‌; ರೊಚ್ಚಿಗೆದ್ದು ಮರ್ಡರ್‌

ಮೈಸೂರು; ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಇನ್ಸ್ಟಾಗ್ರಾಂನಲ್ಲಿ ಕೆಟ್ಟದಾಗಿ ಕಮೆಂಟ್‌ ಮಾಡಿದ್ಕ್ಕೆ ರೊಚ್ಚಿಗೆದ್ದ ಇಬ್ಬರು ಯುವಕರು, ಬೀರೇಶ್‌ ಎಂಬ ಯುವಕನನ್ನು ಕೊಲೆ ಮಾಡಿದ್ದಾರೆ. ಹುಣಸೂರು ಪಟ್ಟಣದ ಸರಸ್ವತಿ ಪ್ಲಾಜಾ ಬಳಿ ಈ ಘಟನೆ ನಡೆದಿದೆ.

ನಿತಿನ್‌ ಹಾಗೂ ಮನು ಎಂಬುವವರೇ ಆರೋಪಿಗಳು. ಇನ್ಸ್ಟಾಗ್ರಾಂನಲ್ಲಿ ನಿತಿನ್‌ ಬಗ್ಗೆ ಬೀರೇಶ್‌ ಕೆಟ್ಟದಾಗಿ ಕಮೆಂಟ್‌ ಮಾಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದ್ವೇಷ ಸಾಧಿಸಿದ ನಿತಿನ್‌ ಹಾಗೂ ಆತನ ಸ್ನೇಹಿತ ಮನು ಚಾಕುವಿನಿಂದ ಬೀರೇಶ್‌ಗೆ ಇರಿದಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಬೀರೇಶ್‌ ನನ್ನು ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ್ದಾನೆ. ಹುಣಸೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Share Post