CrimeDistricts

ರೈಲು ಹಳಿ ಪಕ್ಕ ಮೃತದೇಹ ಪತ್ತೆ; ಕೊಲೆ ಮಾಡಿರುವ ಶಂಕೆ..!

ಚಿಕ್ಕಬಳ್ಳಾಪುರ; ರೈಲು ಹಳಿ ಪಕ್ಕದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಶಿಡ್ಲಘಟ್ಟ ತಾಲ್ಲೂಕಿನ ಹುಣಸೇನಹಳ್ಳಿ ಬಳಿಯ ರೈಲು ಹಳಿ ಪಕ್ಕದಲ್ಲಿ ಈ ಶವ ಪತ್ತೆಯಾಗಿದೆ. ಮೃತನನ್ನು ನಾರಾಯಣ ದಾಸರಹಳ್ಳಿಯ ನರಸಿಂಹಮೂರ್ತಿ ಎಂದು ಗುರುತಿಸಲಾಗಿದೆ.

ಮೃತ ನರಸಿಂಹಮೂರ್ತಿ ಶಿಡ್ಲಘಟ್ಟದ ಖಾಸಗಿ ಶಾಲೆಯೊಂದರ ಬಸ್‌ ಚಾಲಕನಾಗಿದ್ದನೆಂದು ತಿಳಿದುಬಂದಿದೆ. ಮೃತದೇಹದ ಬಳಿ ಒಂದು ಫೋನ್‌ ಹಾಗೂ ಬೈಕ್‌ ಪತ್ತೆಯಾಗಿದೆ. ದೇಹದ ತಲೆ ಹಾಗೂ ಹೊಟ್ಟೆ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ಹೀಗಾಗಿ ಇದು ಕೊಲೆ ಇರಬಹುದು ಎಂಬ ಅನುಮಾನ ಮೂಡಿದೆ.

ಘಟನಾ ಸ್ಥಳಕ್ಕೆ ಶಿಡ್ಲಘಟ್ಟ ಸಿಪಿಐ ಧರ್ಮೇಗೌಡ ಹಾಗೂ ಗ್ರಾಮಾಂತರ ಠಾಣಾ ಪಿಎಸ್‍ಐ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಸ್‍ಪಿ ಡಿ.ಎಲ್.ನಾಗೇಶ್ ಸಹ ಭೇಟಿ ನೀಡಿದ್ದಾರೆ. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post