Districts

ಕುಡುಕ ಗಂಡನ ಕಾಟಕ್ಕೆ ಹೈರಾಣ; ರೊಚ್ಚಿಗೆದ್ದು ಪತಿಯ ಜೀವ ತೆಗೆದ ಪತ್ನಿ

ಮೈಸೂರು: ಗಂಡ ದಿನಾ ಕುಡಿದು ಮನೆಗೆ ಬರುತ್ತಿದ್ದ ಸಾಲದೆಂಬಂತೆ ಪತ್ನಿಗೆ ಹೊಡೆದು, ಬಡಿದು ಕಿರುಕುಳು ನೀಡುತ್ತಿದ್ದ. ಇದ್ರಿಂದ ಬೇಸತ್ತ ಪತ್ನಿ ತಿರುಗಿಬಿದ್ದಿದ್ದು, ಆಕ್ರೋಶದಿಂದ ಆಕೆ ಹೊಡೆದಿದ್ದಕ್ಕೆ ಪತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

     ಈ ಘಟನೆ ನಡೆದಿರೋದು ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ. ನಲವತ್ತೆರಡು ವರ್ಷದ ಬಸವರಾಜಪ್ಪ ಮೃತ ವ್ಯಕ್ತಿ. ಎಂದಿನಂತೆ ನಿನ್ನೆ ರಾತ್ರಿಯೂ ಬಸವರಾಜಪ್ಪ ಕುಡಿದು ಮನೆಗೆ ಬಂದಿದ್ದ. ವಿನಾಕಾರಣ ಪತ್ನಿ ನೇತ್ರಾ ಜೊತೆ ಜಗಳ ತೆಗೆದಿದ್ದ. ಆಕೆಯ ಮೇಲೆ ಹಲ್ಲೆಯನ್ನೂ ಮಾಡಿದ್ದ. ಪ್ರತಿದಿನ ಇದೇ ರೀತಿ ಜಗಳ ಆಗುತ್ತಿರುವುದರಿಂದ ನೊಂದಿದ್ದ ನೇತ್ರ, ನಿನ್ನೆ ಗಂಡನ ವಿರುದ್ಧ ತಿರುಗಿಬಿದ್ದಿದ್ದಾಳೆ.

ಹೊಡೆಯಲು ಬಂದ ಗಂಡನ ಮೇಲೆ ನೇತ್ರಾ ರೋಷ ತೋರಿಸಿದ್ದಾರೆ. ಗಂಡ ಕುತ್ತಿಗೆ ಹಿಡಿದು ನೆಲಕ್ಕೆ ನೂಗಿದ್ದಾಳೆ. ಇದ್ರಿಂದಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸದ್ಯ ನೇತ್ರಾಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Share Post