Districts

ಪತಿಯಿಂದಲೇ ಪತ್ನಿ ಹತ್ಯೆ, ಕಾರಣ ಗೊತ್ತಾ?

ಮೈಸೂರು: ಪತಿಯಿಂದಲೇ ಪತ್ನಿಯನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ದೇವಿ (೨೮) ಕೊಲೆಯಾದ ದುರ್ದೈವಿ. ನಂಜಗೂಡಿನ ಕಪಿಲಾ ನದಿಯಲ್ಲಿ ಮುಳುಗಿಸಿ ೫ ತಿಂಗಳ ಗರ್ಭಿಣಿಯನ್ನು ಗಂಡ ರಾಜೇಶ್‌ ಎಂಬಾತ ಕೊಲೆ ಮಾಡಿದ್ದಾನೆ.
ಮಕ್ಕಳು ಸೇರಿದಂತೆ ಪತ್ನಿಯನ್ನು ಕೊಲ್ಲಲ್ಲು ಪತಿ ರಾಜೇಶ್‌ ಯತ್ನಿಸಿದ್ದ. ಆದರೆ ಇದನ್ನು ನೋಡಿದ ಗ್ರಾಮಸ್ಥರು ಕೂಡಲೇ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಇನ್ನು ದೇವಿಯನ್ನು ರಕ್ಷಣೆ ಮಾಡುವಷ್ಟರಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸದ್ಯ ಅಸ್ವಸ್ಥ ಮಕ್ಕಳನ್ನು ಪೊಲೀಸರು ತಳವಾರ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ನಂಜನಗೂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ರಾಜೇಶನನ್ನು ಬಂಧಿಸಿದ್ದಾರೆ

Share Post