DistrictsHealth

ಧ್ರುವನಾರಾಯಣ್‌ಗೆ ಏನಾಗಿತ್ತು..?; ರಾತ್ರಿಯೇ ವೈದ್ಯರ ಬಳಿ ಹೋಗಿದ್ದಿದ್ದರೆ ಬದುಕುತ್ತಿದ್ದರಾ..? – ವೈದ್ಯರು ಏನೇಳ್ತಾರೆ..?

ಮೈಸೂರು; ಧ್ರುವನಾರಾಯಣ್‌ ಅವರು ರಾತ್ರಿಯೇ ವೈದ್ಯ ಮಂಜುನಾಥ್‌ ಅವರಿಗೆ ಕರೆ ಮಾಡಿ, ಹುಷಾರಿಲ್ಲ ಎಂದು ಹೇಳಿದ್ದಾರೆ. ಹಾಗಾದ್ರೆ ಆಸ್ಪತ್ರೆಗೆ ಕೂಡಲೇ ಬನ್ನಿ ಎಂದು ಡಾ.ಮಂಜುನಾಥ್‌ ಕರೆದಿದ್ದಾರೆ. ಆದ್ರೆ ಈಗ ಆಗಲ್ಲ ಬೆಳಗ್ಗೆ ಬರುತ್ತೇನೆ ಎಂದು ಧ್ರುವನಾರಾಯಣ್‌ ಅವರು ಊಟ ಮಾಡಿ ಮಲಗಿದ್ದಾರೆ. ಆದ್ರೆ ಬೆಳಗಾಗುವಷ್ಟರಲ್ಲಿ ಅವರ ಪ್ರಾಣ ಪಕ್ಷಿಯೇ ಹಾರಿಹೋಗಿದೆ. ರಾತ್ರಿಯೇ ಚಿಕಿತ್ಸೆ ಪಡೆದಿದ್ದರೆ ಧ್ರುವನಾರಾಯಣ್‌ ಅವರು ಬದುಕುಳಿಯುವ ಸಾಧ್ಯತೆ ಇತ್ತು.

ವೈದ್ಯ ಮಂಜುನಾಥ್‌ ಅವರು ಜಾಗಿಂಗ್‌ ಮುಗಿಸಿ ಮನೆಗೆ ಬರುವಷ್ಟರಲ್ಲಿ ಧ್ರುವನಾರಾಯಣ್‌ ಅವರ ಕಾರಿನ ಡ್ರೈವರ್‌ ಅರ್ಜೆಂಟ್‌ ಬರುವಂತೆ ಕೂಗಿದ್ದಾರೆ. ಓಡಿಬಂದ ಮಂಜುನಾಥ್‌, ಮೊದಲ ಮಹಡಿಯಲ್ಲಿ ನೋಡಿದಾಗ ಧ್ರುವನಾರಾಯಣ್‌ ರಕ್ತದಮಡುವಿನಲ್ಲಿ ಬಿದ್ದಿದ್ದರಂತೆ. ಸುಮಾರು 3 ಲೀಟರ್‌ನಷ್ಟು ರಕ್ತ ಹರಿದಿತ್ತಂತೆ. ಆಗಲೇ ಅವರ ದೇಹ ಉಸಿರು ನಿಂತ ಸ್ಥಿತಿಯಲ್ಲಿತ್ತು ಎಂದು ವೈದ್ಯ ಮಂಜುನಾಥ್‌ ಹೇಳಿದ್ದಾರೆ.

ಧ್ರವನಾರಾಯಣ್‌ ಅವರು ಚುನಾವಣೆ ಇದ್ದಿದ್ದರಿಂದ ಒತ್ತಡದಲ್ಲಿದ್ದರು. ಇದರಿಂದಾಗಿ ಅಲ್ಸರ್ಸ್ ಜಾಸ್ತಿ ಆಗಿ ಹೊಟ್ಟೆಯಲ್ಲಿ ಬ್ಲೀಡಿಂಗ್ ಆಗಿದೆ ಎಂದು ವೈದ್ಯರು ಹೇಳಿದ್ದಾರೆ.

Share Post