CrimeDistricts

ಶಾರೀಖ್‌ ಸಂಪರ್ಕ ಹೊಂದಿದ್ದ ಸಯ್ಯದ್‌ ಅಹಮದ್‌ ವಿಚಾರಣೆ

ಮೈಸೂರು; ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ಆರೋಪಿ ಶಾರೀಖ್‌ಗೆ ಮೈಸೂರಿನಲ್ಲಿ ಸಂಪರ್ಕ ಹೊಂದಿದ್ದ ಸೈಯ್ಯದ್‌ ಅಹಮದ್‌ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸೈಯ್ಯದ್‌ ಅಹಮದ್‌ ಮೊಬೈಲ್‌ ಅಂಗಡಿ ಹೊಂದಿದ್ದು, ಶಾರೀಖ್‌ಗೆ ಮೊಬೈಲ್‌ಗಳನ್ನು ಪೂರೈಕೆ ಮಾಡಿದ್ದ ಈ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಈ ನಡುವೆ ಸಯ್ಯದ್‌ ಅಹಮದ್‌ಗೆ ಸಂಬಂಧಿಸಿದ ಸರ್ಟೀಫಿಕೇಟ್‌ ಒಂದು ಪತ್ತೆಯಾಗಿದೆ. ಸೈಯ್ಯದ್‌ ಅಹಮದ್‌ ಮೈಸೂರಿನ ಶ್ರೀ ಮಲೆ ಮಹದೇಶ್ವರ ಟ್ರೈನಿಂಗ್‌ ಇನ್ಸ್ಟಿಟ್ಯೂಟ್‌ನಲ್ಲಿ ಮೊಬೈಲ್‌ ರಿಪೇರಿ ತರಬೇತಿಯನ್ನು ಪಡೆದಿದ್ದಾರೆ. ಈತ ಶಾರೀಖ್‌ಗೆ ಬಾಂಬ್‌ ತಯಾರಿಗೆ ಸಹಕಾರ ನೀಡಿರಬಹುದು ಎಂದು ಶಂಕಿಸಲಾಗಿದೆ. ಇಬ್ಬರೂ ಸೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ದರಾ ಎಂಬುದರ ಬಗ್ಗೆಯೂ ತನಿಖೆ ತೀವ್ರಗೊಳ್ಳುತ್ತಿದೆ.

Share Post