CrimeDistricts

ಸಹೋದರರ ಜಗಳ; ಬಯಲಾಯ್ತು ನಾಡಬಂದೂಕು ರಹಸ್ಯ

ಯಾದಗಿರಿ; ಹಣದ ವಿಚಾರಕ್ಕೆ ಸಹೋದರರ ನಡುವೆ ಜಗಳ ನಡೆದಿದ್ದು, ಇದರಿಂದಾಗಿ ನಾಡ ಬಂದೂಕು ತಯಾರಿಸುತ್ತಿದ್ದ ರಹಸ್ಯ ಬಯಲಾಗಿದೆ. ಯಾದಗಿರಿಯ ರಾಮಸಮುದ್ರದಲ್ಲಿ ಈ ಘಟನೆ ನಡೆದಿದೆ. ಭೀಮಣ್ಣ ಎಂಬುವವರೇ ಬಂಧಿತ ಆರೋಪಿಯಾಗಿದ್ದಾನೆ.

ಅಂದಹಾಗೆ ಭೀಮಣ್ಣ ಕುಟುಂಬ ಬೆಂಗಳೂರಿಗೆ ಹೋಗಿ ಕೂಲಿ ಕೆಲಸ ಮಾಡುತ್ತಿತ್ತು. ಮೂರು ತಿಂಗಳ ಹಿಂದಷ್ಟೇ ಭೀಮಣ್ಣನ ಮದುವೆ ಮಾಡಿತ್ತು. ಮದುವೆಗಾಗಿ ಒಂದಷ್ಟು ಸಾಲ ಕೂಡಾ ಮಾಡಲಾಗಿತ್ತು. ಹೀಗಾಗಿ ಬೆಂಗಳೂರಿಗೆ ಹೋಗಿ ಕೆಲಸ ಮಾಡಿ ಸಾಲ ತೀರಿಸುವಂತೆ ಕುಟುಂಬಸ್ಥರು ಹೇಳಿದ್ದಾರೆ. ಆದ್ರೆ ಭೀಮಣ್ಣ ಇದಕ್ಕೆ ಒಪ್ಪಿಲ್ಲ. ಇದೇ ಕಾರಣಕ್ಕೆ ಜಗಳ ನಡೆದಿದೆ. ಈ ವೇಳೆ ಭೀಮಣ್ಣ ನಾಡ ಬಂದೂಕು ತಂದು ಬೆದರಿಸಿದ್ದಾನೆ.

ಇದರಿಂದಾಗಿ ಸಹೋದರ ಮೌನೇಶ್‌ ಯಾದಗಿರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ಆರೋಪಿ ಭೀಮಣ್ಣನನ್ನು ವಿಚಾರಣೆ ನಡೆಸಿದಾಗಿ ನಾಡ ಬಂದೂಕು ತಯಾರಿಯ ವಿಷಯ ಗೊತ್ತಾಗಿದೆ. ಭೀಮಣ್ಣ ಬೇರೆ ಬೇರೆ ಕಡೆಯಿಂದ ಕಚ್ಚಾ ವಸ್ತುಗಳನ್ನು ತಂದು ಗ್ರಾಮದ ಬೆಟ್ಟದಲ್ಲಿ ನಾಡ ಬಂದೂರು ತಯಾರಿ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

Share Post