DistrictsPolitics

ರಕ್ತದಲ್ಲಿ ಬರೆದುಕೊಡ್ತೀನಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತೆ; ಡಿ.ಕೆ.ಶಿವಕುಮಾರ್‌

ಮೈಸೂರು; ಈ ಬಾರಿ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್‌ 150 ಸೀಟು ಗೆದ್ದೇ ಗೆಲ್ಲುತ್ತೆ. ಹೀಗಂತ ನಾನು ರಕ್ತದಲ್ಲಿ ಬರೆದುಕೊಡುತ್ತೇನೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ನಲವತ್ತು ಸ್ಥಾನಕ್ಕೆ ಸುಸ್ತಾಗುತ್ತೆ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಅವರು ಬಿಜೆಪಿಯೇ ಈ ಬಾರಿ ಅಧಿಕಾರಕ್ಕೆ ಬರೋದು ರಕ್ತದಲ್ಲಿ ಬರೆದುಕೊಡ್ತೀನಿ ಅಂತ ಯಡಿಯೂರಪ್ಪ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌ ಈ ರೀತಿ ಹೇಳಿದರು. ಬಿಜೆಪಿಯದ್ದು ನಲವತ್ತು ಪರ್ಸೆಂಟ್‌ ಸರ್ಕಾರ. ಹೀಗಾಗಿ ಅವರಿಗೆ ಈ ಬಾರಿ ನಲವತ್ತು ಸೀಟು ಅಷ್ಟೇ ಬರೋದು ಎಂದು ಭವಿಷ್ಯ ನುಡಿದರು.

Share Post