BengaluruDistricts

ದರ್ಶನ್‌ರನ್ನು ಪಾರು ಮಾಡುವಂತೆ ಗೃಹ ಸಚಿವರ ಎದುರು ಕಣ್ಣೀರಿಟ್ಟರಂತೆ ಆ ಪ್ರಭಾವಿ ಸಚಿವ!!

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್‌ರನ್ನು ಪಾರು ಮಾಡಲು ಪ್ರಭಾವಿ ಸಚಿವರೊಬ್ಬರು ಶತಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.. ಅವರು ದರ್ಶನ್‌ ಅವರಿಗಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮುಂದೆ ಕಣ್ಣೀರಿಟ್ಟಿದ್ದಾರೆ ಎಂದು ಕೆಲ ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.. ಜೊತೆಗೆ ದರ್ಶನ್‌ ರನ್ನು ಕೇಸ್‌ನಿಂದ ತಪ್ಪಿಸುವಂತೆ ಪರಮೇಶ್ವರ್‌ ಅವರ ಕಾಲಿಗೆ ಬೀಳಲು ಕೂಡಾ ಹೋಗಿದ್ದರು ಎಂದೂ ಹೇಳಲಾಗುತ್ತಿದೆ..

ದರ್ಶನ್‌ ಬಂಧನವಾದ ನಂತರ ಗೃಹ ಸಚಿವರ ಮನೆಗೆ ಹೋಗಿದ್ದ ಪ್ರಭಾವಿ ಸಚಿವರು, ಅಳಲು ತೋಡಿಕೊಂಡಿದ್ದು, ದರ್ಶನ್‌ರನ್ನು ಪಾರು ಮಾಡುವಂತೆ ಕಣ್ಣೀರು ಹಾಕಿ ಮನವಿ ಮಾಡಿದ್ದರು ಎಂದು ಹೇಳಲಾಗಿದೆ.. ಇದೇ ವೇಳೆ ಗೃಹ ಸಚಿವರು ಕಾನೂನು ಸಚಿವ ಹೆಚ್‌.ಕೆ.ಪಾಟೀಲರನ್ನು ಸ್ಥಳಕ್ಕೆ ಕರೆಸಿ ಈ ಬಗ್ಗೆ ಮಾತನಾಡಿದ್ರಂತೆ.. ಈ ವೇಳೆ ಸಮಗ್ರವಾಗಿ ಚರ್ಚೆ ಮಾಡಿರುವ ಹೆಚ್‌.ಕೆ.ಪಾಟೀಲರು, ದರ್ಶನ್‌ ಬಿಡುಗಡೆಗೆ ನಾವು ಯತ್ನ ಮಾಡಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದ್ದಾರಂತೆ..

ಇನ್ನು ದರ್ಶನ್‌ ಪಾರು ಮಾಡಲು ಹೋದರೆ ನೀವು ಪ್ರಕರಣದಲ್ಲಿ ಸಿಲುಕಿಕೊಳ್ಳಬಹುದು ಎಂದೂ ಸಚಿವ ಹೆಚ್‌.ಕೆ.ಪಾಟೀಲರು ಸಚಿವರಿಗೆ ಎಚ್ಚರಿಕೆ ಕೊಟ್ಟರೆಂದು ಕೆಲ ಮಾಧ್ಯಮಗಳು ವರದಿ ಮಾಡಿವೆ..

Share Post