CrimeDistricts

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನಿಂದಲೇ ವ್ಯಕ್ತಿಯ ಕೊಲೆ; ಆರೋಪಿ ಅರೆಸ್ಟ್‌

ಕನಕಪುರ; ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಕೊಲೆಯಾಗಿದೆ. ಸ್ನೇಹಿತನೇ ವ್ಯಕ್ತಿಯೊನ್ನ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. 35 ವರ್ಷದ ರವೀಶ್‌ ಎಂಬಾತನನ್ನು ಆತನ ಸ್ನೇಹಿತ ರವಿಕುಮಾರ್‌ ಅಲಿಯಾಸ್‌ ಲೊಡ್ಡೆ ಕೊಲೆ ಮಾಡಿದ್ದಾರೆ.

ಕನಕಪುರ ತಾಲ್ಲೂಕು ಟಿ.ಗೊಲ್ಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಇಬ್ಬರು ನಡುವೆ ಜಗಳ ನಡೆದಿದೆ. ಇದು ಮಾತಿಗೆ ಮಾತು ಬೆಳೆದು ಆರೋಪಿ ರವಿಕುಮಾರ್‌ ಚಾಕುವಿನಿಂದ ರವೀಶ್‌ಗೆ ಇರಿದಿದ್ದಾನೆ. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿ ರವೀಶ್‌ ಸಾವನ್ನಪ್ಪಿದ್ದಾನೆ.

ಆರೋಪಿ ರವಿಕುಮಾರ್‌ನನ್ನು ಕೋಡಿಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.

 

Share Post