Districts

ಸಮುದ್ರಕ್ಕೆ ಹಾರಿದ ಪ್ರಿಯತಮೆ; ಉಳಿಸಲು ಹೋಗಿ ಪ್ರಿಯಕರ ಸಾವು

ಉಳ್ಳಾಲ; ಸ್ನೇಹಿತೆ ಆತ್ಮಹತ್ಯೆ ಮಾಡಿಕೊಳ್ಳಲೆಂದು ಸಮುದ್ರಕ್ಕೆ ಹಾರಿದ್ದಳು. ಆಕೆಯನ್ನು ಉಳಿಸಲು ಸ್ನೇಹಿತ ಕೂಡಾ ಸಮುದ್ರಕ್ಕೆ ಹಾರಿದ್ದ. ವಿಚಿತ್ರ ಅಂದ್ರೆ ಸ್ನೇಹಿತೆಯೇ ಪ್ರಾಣ ಉಳಿಸಲು ಹೋದ ಸ್ನೇಹಿತ ಸಮುದ್ರ ಪಾಲಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳಲು ಹೋದ ಯುವತಿ ಬದುಕಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸೋಮೇಶ್ವರ ಸಮುದ್ರ ತೀರದಲ್ಲಿ ಕಳೆದ ರಾತ್ರಿ ಈ ದುರ್ಘಟನೆ ನಡೆದಿದೆ.

    ಮುನ್ನೂರು ಗ್ರಾಮದ ಲಾಯ್ಡ್‌ ಡಿಸೋಜಾ ಎಂಬಾಯನೇ ಸಮುದ್ರ ಪಾಲಾದ ಯುವಕ. ಈ ಸ್ನೇಹಿತೆ ಅಶ್ವಿತಾ ಎಂಬಾಕೆ ನಿನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದನ್ನು ನೋಡಿದ ಲಾಯ್ಡ್‌ ಡಿಸೋಜಾ, ಆಕೆಯನ್ನು ಉಳಿಸಲು ಹೋಗಿ ಆತನೇ ಪ್ರಾಣ ಕಳೆದುಕೊಂಡಿದ್ದಾನೆ.

ಲಾಯ್ಡ್‌ ಡಿಸೋಜಾ ಆಶ್ವಿತಾಳನ್ನು ಪ್ರೀತಿಸುತ್ತಿದ್ದನಂತೆ. ಎಂಟು ವರ್ಷಗಳಿಂದ ಇವರಿಬ್ಬರ ನಡುವೆ ಪ್ರೀತಿ ಇದ್ದರೂ, ಲಾಯ್ಡ್‌ ಮತ್ತೊಬ್ಬಾಕೆಯ ಜೊತೆಗೂ ಸ್ನೇಹ ಬೆಳೆಸಿದ್ದನಂತೆ. ಹೀಗಾಗಿಯೇ ಅಶ್ವಿತಾ ಹಾಗೂ ಲಾಯ್ಡ್‌ ನಡುವೆ ಗಲಾಟೆಯಾಗಿದ್ದು, ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಲಾಯ್ಡ್‌ ಡಿಸೋಜಾ ಆಕೆಯನ್ನು ಉಳಿಸಲು ಹೋಗಿ ಜೀವ ಕಳೆದುಕೊಂಡಿದ್ದಾನೆ.

 

Share Post