Districts

ಒಳ ಹರಿವು ಹೆಚ್ಚಳ; ಕೆಆರ್‌ಎಸ್‌ನಿಂದ ಭಾರಿ ನೀರು ಹೊರಕ್ಕೆ

ಮಂಡ್ಯ; ಮಳೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಜಲಾಶಯದಿಂದ ಭಾರಿ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗಿದೆ. ಇಂದು ಕೆಆರ್‌ಎಸ್‌ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್‌ ನೀರು ಹೊರಬಿಡಲಾಗಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ.

ಭಾರಿ ಪ್ರಮಾಣದ ನೀರು ಹೊರಬಿಟ್ಟಿದ್ದರಿಂದಾಗಿ ನಾಲೆಗಳು ತುಂಬಿ, ಜಮೀನುಗಳಿಗೆ ನೀರು ನುಗ್ಗಿದೆ. ಕಬ್ಬು, ಬಾಳೆ, ಅಡಿಕೆ ತೋಟಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಭಾರಿ ಪ್ರಮಾಣದ ಬೆಳೆಹಾನಿಯಾಗಿದೆ. ಇನ್ನೊಂದೆಡೆ ಎಚ್ಚರಿಕೆಯಿಂದ ಇರುವಂತೆ ನದಿ ಪಾತ್ರ ಜನಕ್ಕೆ ಸೂಚಿಸಲಾಗಿದೆ.

Share Post