CrimeDistricts

ಕೊಬ್ಬರಿ ತುಂಬಿದ್ದ ಗೋಡೌನ್‌ಗೆ ಬೆಂಕಿ; ಲಕ್ಷಾಂತರ ರೂಪಾಯಿ ನಷ್ಟ

ಹಾಸನ; ಕೊಬ್ಬರಿ ತುಂಬಿದ್ದ ಗೋಡೌನ್‌ಗೆ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ಹಾಸನ ಜಿಲ್ಲೆ ಚೆನ್ನರಾಯಪಟ್ಟಣದ ಚೋಳನಹಳ್ಳಿಯಲ್ಲಿ ನಡೆದಿದೆ. ನಾಲ್ಕು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕೆಲಸ ಮಾಡಿದವರಾದರೂ ಅಷ್ಟರಲ್ಲಿ ಬಹುತೇಕ ಕೊಬ್ಬರಿ ಬೆಂಕಿಗೆ ಆಹುತಿಯಾಗಿತ್ತು ಎಂದು ತಿಳಿದುಬಂದಿದೆ.

ಚೋಳನಹಳ್ಳಿ ಗ್ರಾಮದ ಸಿ.ಎನ್‌.ಪುಟ್ಟಸ್ವಾಮಿಗೌಡ ಅವರಿಗೆ ಈ ಗೋಡೌನ್‌ ಸೇರಿದೆ. ಇಂದು ಮುಂಜಾನೆಯೇ ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದು ಕೂಡಲೇ ಇಡೀ ಗೋಡೌನ್‌ಗೆ ಬೆಂಕಿ ತಗುಲಿದೆ. ಕೆ.ಆರ್‌.ಪೇಟೆಯಿಂದ ಅಗ್ನಿಶಾಮಕ ವಾಹನಗಳು ಬರುವ ವೇಳೆಗೆ ಬಹುತೇಕ ಎಲ್ಲವೂ ಸುಟ್ಟು ಕರಕಲಾಗಿದ್ದವು.

 

Share Post