Crime

ಪತ್ನಿ ಹಾಗೂ ಆಕೆಯ ತಂಗಿಯನ್ನು ಕೊಂದ ಪಾಪಿ; ಆತನೂ ಆತ್ಮಹತ್ಯೆಗೆ ಯತ್ನಿಸಿದ್ದೇಕೆ..?

ಶ್ರೀಕಾಕುಳಂ: ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ಭೀಕರ ಕೃತ್ಯವೊಂದು ನಡೆದುಹೋಗಿದೆ. ಇಂದು ಮುಂಜಾನೆಯೇ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಆಕೆಯ ತಂಗಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಆತನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಘಟನೆ ನಡೆದಿರೋದು ಎಚ್ಚರ್ಲ ತಾಲ್ಲೂಕಿನ ಮುದ್ದಾಡ್‌ಪೇಟೆಯಲ್ಲಿ.

   ಮುದ್ದಾಡ್‌ಪೇಟೆ ನಿವಾಸಿ ವಿ.ಸಿಅಪ್ಪಣ್ಣ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ. ಅಪ್ಪಣ್ಣ ಪತ್ನಿ ಅಪ್ಪಮ್ಮ ಹಾಗೂ ಆಕೆಯ ಸಹೋದರಿ ಲಕ್ಷ್ಮೀ ಹತ್ಯೆಯಾದವರು. ಇಬ್ಬರನ್ನೂ ಚಾಕುವಿನಿಂದ ತಿವಿದು ಕೊಲೆ ಮಾಡಲಾಗಿದೆ. ಅಡ್ಡ ಬಂದ ತಂದೆ ಹಾಗೂ ಸಹೋದರಿಗೂ ಗಾಯಗೊಳಿಸಲಾಗಿದೆ. ಇದೇ ವೇಳೆ ಅಪ್ಪಣ್ಣ ಕೂಡಾ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಂದೆ, ಸಹೋದರಿ ಹಾಗೂ ಅಪ್ಪಣ್ಣ ಮೂವರ ಪರಿಸ್ಥಿತಿಯೂ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

 

Share Post