Cinema

ಬಿಎಸ್‌ವೈ ನಿವಾಸಕ್ಕೆ ಕಮಲ್‌ ಪಂತ್‌ ಭೇಟಿ; ಫ್ಲ್ಯಾಟ್‌ನಲ್ಲಿ ಪೊಲೀಸರ ಪರಿಶೀಲನೆ

ಬೆಂಗಳೂರು: ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಮಾಜಿ ಸಿಎಂ ಬಿಎಸ್‌ವೈ ಮನೆಗೆ ಭೇಟಿ ನೀಡಿದ್ದರು. ಕಾವೇರಿ ನಿವಾಸಕ್ಕೆ ಭೇಟಿ ನೀಡಿದ್ದ ಪೊಲೀಸ್‌ ಆಯುಕ್ತರು, ಸೌಂದರ್ಯ ಸಾವಿನ ಬಗ್ಗೆ ಚರ್ಚೆ ನಡೆಸಿದರು.  ಯಡಿಯೂರಪ್ಪ ಮೊಮ್ಮಗಳು ಡಾ.ಸೌಂದರ್ಯ ನಿನ್ನೆ ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ವಸಂತ ನಗರದ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಮಲ್‌ ಪಂತ್‌ ಅವರು ಯಡಿಯೂರಪ್ಪ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ, ಪೊಲೀಸರು ವಸಂತನಗರದ ಫ್ಲ್ಯಾಟ್‌ಗೆ ಭೇಟಿ ಕೊಟ್ಟಿದ್ದಾರೆ. ಸ್ಥಳ ಮಹಜರು ನಡೆಸಬೇಕಾದ ಕಾರಣ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆದರೆ, ಅಲ್ಲಿ, ಸೌಂದರ್ಯ ಪತಿ ಡಾ.ನೀರಜ್‌ ಇಲ್ಲ. ನೀರಜ್‌ ಬಂದ ಮೇಲೆ ಸ್ಥಳ ಮಹಜರು ನಡೆಲಾಗುತ್ತದೆ.

 

Share Post