DistrictsPolitics

ಕೆಲ ನಾಯಕರು ಸ್ವಹಿತಕ್ಕಾಗಿ ಬಿಜೆಪಿ ಪಕ್ಷ ಬಲಿ ಕೊಡ್ತಿದ್ದಾರೆ; ಜಗದೀಶ್‌ ಶೆಟ್ಟರ್‌

ಹುಬ್ಬಳ್ಳಿ; ಪಕ್ಷದಲ್ಲಿನ ಕೆಲ ನಾಯಕರು ತಮ್ಮ ಅನುಕೂಲ ಹಾಗೂ ಹಿತಕ್ಕಾಗಿ ಇಡೀ ಬಿಜೆಪಿ ಪಕ್ಷವನ್ನು ಬಲಿ ಕೊಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಆಕ್ರೋಶಹೊರಹಾಕಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಶಿರಸಿಗೆ ತೆರಳುವುದಕ್ಕೂ ಮೊದಲು ಅವರು ಮಾತನಾಡಿದರು.

ಬಿಜೆಪಿಯಲ್ಲಿ ಹಿರಿಯರಿಗೆ ಗೌರವ ಸಿಗುತ್ತಿಲ್ಲ. ಇದೇ ಬಿಜೆಪಿ ಪಕ್ಷಕ್ಕೆ ಮುಳುವಾಗುತ್ತದೆ. ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮಿತ್‌ ಶಾಗೆ ಬಿಜೆಪಿಯ ಇಲ್ಲಿನ ಪರಿಸ್ಥಿತಿಯ ಅರಿವಿರುವುದಿಲ್ಲ. ರಾಜ್ಯ ಉಸ್ತುವಾರಿಗಳು, ಸ್ಥಳೀಯ ನಾಯಕರು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರ ಬರುವುದು ಬೇಡ ಎಂದು ತೀರ್ಮಾನಿಸಿದ್ದಾರೆ ಅನಿಸುತ್ತೆ. ಹೀಗಾಗೇ ಎಲ್ಲರನ್ನೂ ಕಡೆಗಣಿಸಲಾಗುತ್ತಿದೆ ಎಂದು ಶೆಟ್ಟರ್‌ ಆಕ್ರೋಶ ಹೊರಹಾಕಿದ್ದಾರೆ.

ನಾನು ಬಿಜೆಪಿ ತೊರೆಯುತ್ತಿದ್ದೇನೆ. ಈ ಬಾರಿ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತ. ಕಾಂಗ್ರೆಸ್‌ ಸೇರ್ಪಡೆಗೆ ಆಹ್ವಾನ ಬಂದಿದೆ. ಇದಿಷ್ಟೇ ಅಲ್ಲ, ಹಲವು ಆಯ್ಕೆಗಳು ನನ್ನ ಮುಂದಿವೆ. ಹಿತೈಷಿಗಳ ಜೊತೆ ಸೇರಿ ನಾನು ತೀರ್ಮಾನ ಮಾಡುತ್ತೇನೆ. ಈಗಾಗಲೇ ಕಾಂಗ್ರೆಸ್‌ನವರು ತಮ್ಮ ಪ್ರತಿನಿಧಿಯನ್ನು ಕಳುಹಿಸಿದ್ದಾರೆ ಎಂದೂ ಶೆಟ್ಟರ್‌ ಹೇಳಿದ್ದಾರೆ.

 

Share Post