Districts

ರಾಷ್ಟ್ರಧ್ವಜದ ಪಕ್ಕವೇ ಭಗವಾಧ್ವಜ ಹಾರಿಸಲು ಯತ್ನ

ಬೆಳಗಾವಿ; ಸ್ವಾತಂತ್ರ್ಯ ದಿನೋತ್ಸವದ ದಿನವೇ ಮರಾಠಿ ಭಾಷಿಕ ಪುಂಡರು ಕಿರಿಕ್‌ ಮಾಡಿದ್ದಾರೆ. ರಾಷ್ಟ್ರಧ್ವಜದ ಪಕ್ಕದಲ್ಲೇ ಭಗವಾಧ್ವಜ ಹಾರಿಸಲು ಯತ್ನಿಸಿದ್ದಾರೆ. ಬೆಳಗಾವಿ ಜಿಲ್ಲೆ ನಿಪ್ಪಾಣಿ ನಗರಸಭೆ ಬಳಿ ಈ ಘಟನೆ ನಡೆದಿದೆ.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆಗಳ ಬಳಿ ಧ್ವಜಾರೋಹಣ ನೆರವೇರಿಸಲಾಗುತ್ತದೆ. ಅದರಂತೆ ನಿಪ್ಪಾಣಿಯಲ್ಲಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ನಗರಸಭೆ ಮೇಲೆ ಧ್ವಜಾರೋಹಣ ನೆರವೇರಿಸಿದ್ದಾರೆ. ಇದಾದ ನಂತರ ಬಂದಿರುವ ಮರಾಠಿ ಭಾಷಿಕ ಪುಂಡರು ರಾಷ್ಟ್ರಧ್ವಜದ ಪಕ್ಕದಲ್ಲೇ ಭಗವಾಧ್ವಜ ಹಾರಿಸಲು ಯತ್ನ ಮಾಡಿದ್ದಾರೆ.

ಮರಾಠಿ ಭಾಷಿಕ ನಿಪ್ಪಾಣಿ ನಗರಸಭಾ ಸದಸ್ಯ ವಿನಾಯಕ ವಾಡೆ ಹಾಗೂ ಸಂಜಯ ಸಾಂಗಾವಕರ್ ಅವರು ಭಗವಾ ಧ್ವಜ ಹಾರಿಸಲು ಮುಂದಾಗಿದ್ದರು. ಆದ್ರೆ ಪೊಲೀಸರು ಅದನ್ನು ತಡೆದಿದ್ದು, ಧ್ವಜ ಹಾರಿಸಲು ಬಂದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಮಾತಿನಚಕಮಕಿಯೂ ನಡೆದಿದೆ.

Share Post